ಚಿಕ್ಕನಾಯಕನಹಳ್ಳಿ
ಕಸಾಯಿ ಖಾನೆಗೆ ಸಾಗಿಸುತ್ತಿದ್ದ ದನಕರುಗಳನ್ನು ಪ್ರಾಣಿದಯಾ ಸಂಘದ ಕಾರ್ಯಕರ್ತರು ಹಿಡಿದು ಪೋಲೀಸರಿಗೆ ಒಪ್ಪಿಸಿದ ಘಟನೆ ಶನಿವಾರ ನಡೆದಿದೆ.
ಎರಡು ವಾಹನಗಳಲ್ಲಿ ಸಾಗಿಸುತ್ತಿದ್ದ ಆರು ದನಗಳು ಸೇರಿದಂತೆ ಹದಿನಾರು ಗಂಡು ಕರುಗಳನ್ನು ಸಾಗಿಸುವಾಗ, ಒಂದು ಕರು ಸತ್ತು ಹೋಗಿದೆ. ದನಕರುಗಳನ್ನು ಹೊಸದುರ್ಗ ತಾಲ್ಲೂಕಿನ ಶ್ರೀ ರಾಮಪುರದಿಂದ ಕಸಾಯಿಖಾನೆಗೆ ತೆಗೆದುಕೊಂಡು ಹೋಗುತ್ತಿದ್ದರು ಎಂದು ತಿಳಿದು ಬಂದಿದೆ.
ಪ್ರಾಣಿ ದಯಾಸಂಘದವರಾದ ರಾಕೇಶ್, ಓಂಕಾರ್, ಅಣೆಕಟ್ಟೆರಾಕೇಶ್, ಪ್ರಕಾಶ್ಚೌದ್ರಿ, ಪುನೀತ್ ಕರುಗಳಿಗೆ ಹಾಲು ಕುಡಿಸಿದರು. ನಂತರ ಕೆಲವು ರೈತರು ಗೋಶಾಲೆಯಿಂದ ಹುಲ್ಲನ್ನು ತಂದು ದನಗಳಿಗೆ ನೀಡಿದರು. ವಶಪಡಿಸಿಕೊಂಡ ದನಕರುಗಳನ್ನು ಗುಬ್ಬಿ ತಾಲ್ಲೂಕಿನ ಗೋಶಾಲೆಗೆ ಬಿಡಲಾಗುತ್ತದೆ ಎಂದು ತಿಳಿದುಬಂದಿದೆ. ಈ ಸಂಬಂಧ ವಾಹನ ಚಾಲಕ ಮುಜೂದ್, ಫಯಾಜ್ ಹಾಗೂ ಅರ್ಬಸ್ಖಾನ್ ವಿರುದ್ದ ಚಿ.ನಾ.ಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
