ರೈಲಿನಲ್ಲಿ ಕವಿಘೋಷ್ಠಿ..!!

ಹರಿಹರ:

     ರೈಲಿನಲ್ಲಿ ನಡೆದ ಚುಕುಬುಕು ಕವಿಗೋಷ್ಠಿ ಮಾದರಿಯಾಗಿದೆ. ನಾನು ಪಾಲ್ಗೊಂಡ ಅನೇಕ ಕವಿಗೋಷ್ಠಿಗಳಿಗಿಂತ ಇದು ಭಿನ್ನವಾಗಿದೆ ಎಂದು ಹರಪನಹಳ್ಳಿಯ ಎಸ್.ಯು.ಜೆ.ಎಂ. ಕಾಲೇಜಿನ ಕನ್ನಡ ಉಪನ್ಯಾಸಕ ಹೆಚ್.ಮಲ್ಲಿಕಾರ್ಜುನ ತಿಳಿಸಿದರು.

     ಹರಿಹರದ ಚಿಂತನ ಪ್ರತಿಷ್ಠಾನ, ನವಜ್ಯೋತಿ ಸಾಂಸ್ಕತಿಕ ಸೇವಾ ಸಂಸ್ಥೆ, ಚುಟುಕು ಸಾಹಿತ್ಯ ಪರಿಷತ್ ದಾವಣಗೆರೆ ಜಿಲ್ಲಾ ಘಟಕ ಮತ್ತು ಸ್ಪೂರ್ತಿ ಪ್ರಕಾಶನ ತೆಲಿಗಿ-ದಾವಣಗೆರೆ ಇವರ ಸಹಯೋಗದಲ್ಲಿ ಭಾನುವಾರ ಹರಿಹರ-ಕೊಟ್ಟೂರು ರೈಲುಗಾಡಿಯಲ್ಲಿ ಹಮ್ಮಿಕೊಂಡಿದ್ದ ದಾವಣಗೆರೆ-ಹರಪನಹಳ್ಳಿ ಅಂತರ ಜಿಲ್ಲಾಮಟ್ಟದ ಕವಿಗೋಷ್ಠಿಯನ್ನು ಸಸಿಗೆ ನೀರೆರೆದು ಉದ್ಘಾಟನೆ ಅವರು ಮಾತನಾಡಿದರು. ಇದೊಂದು ವಿಶಿಷ್ಠ ಮತ್ತು ವಿನೂತನ ರಾಜ್ಯದಲ್ಲಿಯೆ ಪ್ರಪ್ರಥಮ ಕಾರ್ಯಕ್ರಮ.

      ಇದೊಂದು ಪ್ರೀತಿ, ವಿಶ್ವಾಸ ಕವಿ ಮನಸುಗಳ ಭಾವನೆಗಳ ಬೆಸುಗೆಯ ಸ್ನೇಹ ಸಮ್ಮಿಲನ ಕಾರ್ಯಕ್ರಮ. ಕವಿ ತನ್ನ ಕಾವ್ಯಗಳ ಮೂಲಕ ಸಮಾಜ ತಿದ್ದುವ ಕೆಲಸ ಮಾಡುತ್ತಾನೆ ಆದರೆ ಅದಕ್ಕೆ ಮೊದಲು ತನ್ನನ್ನು ತಾನು ತಿದ್ದಿಕೊಳ್ಳಬೇಕು. ಮಕ್ಕಳನ್ನು ಓದಿನೊಂದಿಗೆ ಸಾಹತ್ಯ, ಸಂಗೀತ, ಕಲೆ ಮತ್ತಿತರ ವಿಷಯಗಳಲ್ಲಿ ತೊಡಗಿಸುವುದರಿಂದ ಅವರ ಮನಸ್ಸು ಅರಳುವುದರ ಜೊತೆಗೆ ಸೃಜನಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸುತ್ತದೆ ಎಂದರು. ನೀವೆಲ್ಲಾ ಸಹಕಾರ ನೀಡಿದರೆ ಮುಂದೆ ವಿಶಿಷ್ಟ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಾಜ್ಯಕ್ಕೇ ಮಾದರಿಯಾಗೋಣ ಎಂದು ಶುಭ ಹಾರೈಸಿದರು.

     ಕವಿಗೋಷ್ಠಿಗೂ ಮೊದಲು ಪಣ್ಯಕೋಟಿ ಮಠದ ಶ್ರೀ ಬಾಲಯೋಗಿ ಜಗದೀಶ್ವರ ಸ್ವಾಮಿಗಳು ಮತ್ತು ಆರೋಗ್ಯ ಮಾತೆ ದೇವಾಲಯದ ಧರ್ಮಗುರು ಡಾ.ಅಂತೋನಿ ಪೀಟರ್ ಕನ್ನಡ ಬಾವುಟ ತೋರಿಸುವುದರ ಮೂಲಕ ರೈಲಿಗೆ ಚಾಲನೆ ನೀಡಿ ಆಶೀರ್ವದಿಸಿದರು. ರೈಲು 8-50ಕ್ಕೆ ಹರಿಹರ ಬಿಟ್ಟು ಕೊಟ್ಟೂರು ಕಡೆಗೆ ಪ್ರಯಾಣ ಬೆಳೆಸಿತು.

      ಸ್ಪೂರ್ತಿ ಪ್ರಕಾಶನದ ಎಂ.ಬಸವರಾಜ್ ಮಾತನಾಡಿ, ಇದೊಂದು ಅದ್ಭುತ ಕಾರ್ಯಕ್ರಮ. ನನಗಂತೂ ತುಂಬಾ ಸಂತಸವಾಗಿದೆ. ಇಷ್ಟೊಂದು ಕವಿಗಳ ಮಧ್ಯೆ ನನಗೆ ಮಾತು ಹೊರಡದಾಗಿದೆ. ಎಲ್ಲರಿಗೂ ಒಳ್ಳೆಯದಾಗಲಿ. ಮುಂದೆಯೂ ನಮ್ಮ ಸಂಸ್ಥೆಯಿಂದ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

       ಕವಿಗೋಷ್ಠಿಯ ಅಧ್ಯಕ್ಷತೆವಹಿಸಿದ್ದ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಘಟಕದ ಅಧ್ಯಕ್ಷ ರಾಜಶೇಖರ್ ಗುಂಡಗಟ್ಟಿ ಮಾತನಾಡಿ, ಜೀವನದ ಪಯಣದಲ್ಲಿ ನಾವೆಲ್ಲಾ ಪಯಣಿಗರು. ಎಲ್ಲರೊಡನೆ ಬೆರೆತು ಸಾಗಿದಾಗ ಸಾಹಿತ್ಯದ ಚಿಂತನೆ ನಡೆಸಿದಾಗ ಆಗುವ ಅನುಭವವೇ ಬೇರೆ. ಈ ಕವಿಗೋಷ್ಠಿ ಮನಸ್ಸಿಗೆ ಉಲ್ಲಾಸ ಹುರುಪು ತಂದಿದೆ. ಮುಂದಿನ ದಿನಗಳಲ್ಲಿ ಸಮುದ್ರದ ತಟದಲ್ಲಿ ಕವಿಗೋಷ್ಠಿ ಹಮ್ಮಿಕೊಳ್ಳುವ ಮನಸ್ಸು ಬಂದಿದೆ ಎಂದರು.

     ಚಿಂತನ ಪ್ರತಿಷ್ಠಾನದ ಅಧ್ಯಕ್ಷ ಸುಬ್ರಹ್ಮಣ್ಯ ನಾಡಿಗೇರ್ ಪ್ರಾಸ್ತಾವಿಕವಾಗಿ ನುಡಿದು ಮುಂದಿನ ದಿನಗಳಲ್ಲಿ ನಾವೆಲ್ಲಾ ಸೇರಿ ವಿಭಿನ್ನ ರೀತಿಯ ಚುಟುವಟಿಕೆಗಳನ್ನು ಹಮ್ಮಿಕೊಳ್ಳೋಣ ಎಂದು ತಿಳಿಸಿ, ಆಗಮಿಸಿದ ಎಲ್ಲಾ ಸಾಹಿತ್ಯಾಸಕ್ತರಿಗೆ ಶುಭ ಕೋರಿದರು. ಡಿ.ಫ್ರಾನ್ಸಿಸ್ ಸ್ವಾಗತಿಸಿದರು. ಶ್ರೀಮತಿ ಉಮಾದೇವಿ ಪ್ರಾರ್ಥಿಸಿದರು. ತೆಲಿಗಿ ವೀರಭದ್ರಪ್ಪ ಕಾರ್ಯಕ್ರಮ ನಿರೂಪಿಸಿದರು. ತಾರೇಶ್ ವಂದಿಸಿದರು.ಭಾಗವಹಿಸಿದ್ದ ಎಲ್ಲಾ ಕವಿಮನಗಳಿಗೂ ಅಭಿನಂದನಾ ಪತ್ರ ನೀಡಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link