ಹೆಚ್ ಡಿ ಡಿ ಸೋಲು ಬೇಸರ ತಂದಿದೆ : ಹೊನ್ನಗಿರಿಗೌಡ

ಗುಬ್ಬಿ

     ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದ್ದು ಜಿಲ್ಲೆಯಲ್ಲಿ ಕಾಂಗ್ರೇಸ್ ಮತ್ತು ಜೆಡಿಎಸ್ ಶಾಸಕರು ಸಚಿವರಿದ್ದರೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪರಾಭವಗೊಂಡಿರುವುದು ಬೇಸರ ತಂದಿದೆ ಮುಂಬರುವ ಚುನಾವಣೆಗಳಲ್ಲಿ ಯಾವುದೆ ರೀತಿಯ ಮೈತ್ರಿ ಮಾಡಿಕೊಳ್ಳದೆ ಕಾಂಗ್ರೇಸ್ ಅಭ್ಯರ್ಥಿಗಳು ಪಕ್ಷದಿಂದ ಸ್ಪರ್ಧಿಸಲಿದ್ದಾರೆ. ಮುಂಬರುವ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಲು ಬೂತ್ ಮಟ್ಟದಿಂದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಸಜ್ಜುಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಕಾಂಗ್ರೇಸ್ ಮುಖಂಡ ಹೊನ್ನಗಿರಿಗೌಡ ತಿಳಿಸಿದರು.

      ಪಟ್ಟಣದ ಅವರ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು ಕಾಂಗ್ರೇಸ್ ಪಕ್ಷವನ್ನು ಸಮರ್ಥವಾಗಿ ಮತ್ತು ಸಧೃಢವಾಗಿಸಲು ಕ್ಷೇತ್ರದ ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಸಂಪರ್ಕ ಬೆಳೆಸಿಕೊಂಡು ಮುಂದಿನ ಚುನಾವಣೆಗಳನ್ನು ಯಶಸ್ವಿಯಾಗಿಸಲು ಚಿಂತನೆ ನಡೆಸಿದ್ದು ಪ್ರತಿ ಬೂತ್ ಮಟ್ಟದಿಂದ ಪಕ್ಷವನ್ನು ಸಂಘಟಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದ ಅವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಂದ ಹಿಡಿದು ಜಿಲ್ಲಾ ಅಧ್ಯಕ್ಷರವರೆಗೂ ಬದಲಾವಣೆ ಮಾಡಿದರೆ ಮಾತ್ರ ಮುಂದಿನ ದಿನದಲ್ಲಿ ಪಕ್ಷವು ಉಳಿಯಲು ಸಾಧ್ಯವಾಗುತ್ತದೆ ಇದರ ಬಗ್ಗೆ ಪಕ್ಷದ ವರಿಷ್ಠರು ಚಿಂತನೆ ನಡೆಸಬೇಕಿದೆ ಈಗಾಗಲೆ ರಾಜ್ಯ ಮಟ್ಟದ ವರಿಷ್ಠರ ಗಮನಕ್ಕೂ ತರಲಾಗಿದೆ ಎಂದು ತಿಳಿಸಿದರು.

       ಮಾಜಿ ಸಂಸದ ಎಸ್.ಪಿ.ಮುದ್ದಹನುಮೆಗೌಡರು ಗೆದ್ದು ಬಂದ ಮೇಲೆ ಯಾವ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷ ಗೆಲುವು ಪಡೆದಿಲ್ಲ ಇದು ಬೇಸರದ ಸಂಗತಿಯಾಗಿದ್ದು ತುಮಕೂರು ಜಿಲ್ಲೆಯಲ್ಲಿ ದೇವೆಗೌಡರು ಸೋಲು ಕಂಡಿದ್ದು ಸಾಕಷ್ಟು ಬೇಸರವಾದ ವಿಚಾರವಾಗಿದೆ ಮೈತ್ರಿ ಸರಕಾರವಿದ್ದರು ಸಹ ನಾವು ಸೋತಿರುವುದು ನಮ್ಮ ಮುಖಂಡರುಗಳಿಂದ ಹೊರತು ಕಾರ್ಯಕರ್ತರಿಂದಲ್ಲ ಅವರು ಮತ ಹಾಕಿದ್ದಾರೆ ಕೆಲವು ಮುಖಂಡರುಗಳು ನಾಯಕರು ಕೈ ಕೊಟ್ಟಿದ್ದಾರೆ ಮತ ಹಾಕಿರುವ ನಮ್ಮ ಎಲ್ಲಾ ಕಾರ್ಯಕರ್ತರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

      ಜಿಲ್ಲೆಗೆ ಹರಿಯುವ ಹೇಮಾವತಿ ನೀರಿನ ವಿಚಾರದಲ್ಲಿ ಸಚಿವರ ಪಾತ್ರ ಬಹಳ ಮುಖ್ಯವಾಗಿದ್ದು ಅವರೆ ಮುಂದು ನಿಂತು ನೀರು ಬಿಡಿಸುವ ಕೆಲಸವನ್ನು ಮಾಡಬೇಕೆ ಹೊರತು ಬೇರೆಯವರ ಮೇಲೆ ಹೇಳಿಕೆ ನೀಡಬಾರದು ಎಂದ ಅವರು ಮುಂದಿನ ದಿನದಲ್ಲಿ ಗುಬ್ಬಿ ತಾಲೂಕಿನಲ್ಲಿ ಪ್ರತಿ ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟುವ ಕೆಲಸವನ್ನು ಮಾಡಲಾಗುತ್ತದೆ ಹಾಗೂ ಸಾರ್ವಜನಿಕರಿಗೆ ಸರಕಾರದಿಂದ ಬರುವಂತಹ ಎಲ್ಲಾ ರೀತಿಯ ಯೋಜನೆಗಳನ್ನು ಅವರಿಗೆ ತಲುಪಿಸುವ ಕೆಲಸವನ್ನು ಮಾಡಲಾಗುತ್ತದೆ ತಾಲೂಕಿನಲ್ಲಿ ಉತ್ತಮವಾಗಿ ಕೆಲಸ ಮಾಡುವಂತಹ ಕಾರ್ಯಕರ್ತರನ್ನು ಪಕ್ಷವು ಗುರುತಿಸಿ ಅವರಿಗೆ ಹೆಚ್ಚಿನ ಜವಾಬ್ಧಾರಿಯನ್ನು ನೀಡಿದರೆ ಖಂಡಿತವಾಗಿ ಪಕ್ಷ ಸಂಘಟನೆ ಮಾಡಲು ಸಾಧ್ಯವಾಗುತ್ತದೆ ಎಂದರು.ಪತ್ರಿಕಾ ಗೋಷ್ಟಿಯಲ್ಲಿ ಮುಖಂಡರಾದ ಯೋಗೀಶ್, ಲಕ್ಷ್ಮಿನಾರಾಯಣ್, ಕೃಷ್ಣಪ್ಪ, ಲಕ್ಷಣ್‍ಗೌಡ, ವೆಂಕಟೆಗೌಡ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link