ನಾನು ಆಶೆ, ಆಕಾಂಕ್ಷಿ ಇಟ್ಟು ಕೊಂಡು ಜವಾಬ್ದಾರಿ ತೆಗೆದುಕೊಂಡಿಲ್ಲ,

ಹರಪನಹಳ್ಳಿ,

    ನಾನು ಯಾವುದೇ ಆಶೆ, ಆಕಾಂಕ್ಷಿ ಇಟ್ಟು ಕೊಂಡು ಹರಪನಹಳ್ಳಿ ಜವಾಬ್ದಾರಿ ತೆಗೆದುಕೊಂಡಿಲ್ಲ ಎಂದು ಮುಜರಾಯಿ ಹಾಗೂ ಕೌಶಲ್ಯ ಅಭಿವೃದ್ದಿ ಸಚಿವ ಪಿ.ಟಿ.ಪರಮೇಶ್ವರನಾಯ್ಕ ಹೇಳಿದ್ದಾರೆ.

     ಅವರು ಪಟ್ಟಣದಲ್ಲಿ ಶನಿವಾರ ಸಂಜೆ ವಿಜೇತ ಪುರಸಭಾ ಕಾಂಗ್ರೆಸ್ ಸದಸ್ಯರೊಂದಿಗೆ ವಿಜಯೋತ್ಸವ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದರು.

     ನಾನು ಇಲ್ಲಿ ವಿಧಾನಸಭೆಗೆ ಸ್ಪರ್ದಿಸುವುದಿಲ್ಲ, ಇಲ್ಲಿಯ ಪಕ್ಷದ ಕಾರ್ಯಕರ್ತರನ್ನು ಶಾಸಕರನ್ನಾಗಿ ಮಾಡಬೇಕಾಗಿದೆ ಎಂದು ಹೇಳಿದರು.ರಾಜ್ಯದಲ್ಲಿ ನಮ್ಮದೇ ಸರ್ಕಾರವಿದೆ, ಹೆದರದೆ, ಅಂಜದೆ, ಅಳುಕದೇ ಪಕ್ಷ ಸಂಘಟಿಸಿ ನಾನು ಬಂಡೆ ಎಂತೆ ನಿಮ್ಮ ಹಿಂದೆ ನಿಲ್ಲುತ್ತೇನೆ ಎಂದ ಅವರು ಅವರು ನನ್ನ ಮೇಲೆ ನಂಬಿಕೆ ಇಟ್ಟು ಕಾಂಗ್ರೆಸ್ ಪಕ್ಷದ ವರಿಷ್ಟರು ಹರಪನಹಳ್ಳಿ ಪುರಸಭಾ ಚುನಾವಣೆಯ ಜವಾಬ್ದಾರಿ ವಹಿಸಿದ್ದರು. ಆ ಪ್ರಕಾರ ನೀವು ಸಹ ನನ್ನ ನಾಯಕತ್ವಕ್ಕೆ ಬೆಂಬಲಿಸಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿದ್ದೀರಿ, ಅದಕ್ಕೆ ನಾನು ತಮಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.

     ಪಟ್ಟಣದಲ್ಲಿ ತಾ.ಪಂ ಯಿಂದ ಅಯ್ಯನಕೆರೆಗೆ ಹೋಗುವ ಲಂಡನ್ ಹಳ್ಳ ಸಾರ್ವಜನಿಕರಿಗೆ ಬಹಳಷ್ಟು ದುಸ್ಪರಿಣಾಮ ಬೀರುತ್ತದೆ, ಅದನ್ನು ಆಧುನೀಕರಣ ಗೊಳಿಸಿ ಸರಿ ಮಾಡಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿz್ದÉೀನೆ ಎಂದು ನುಡಿದರು.
ನಿವೇಶನ ರಹಿತರಿಗೆ ನಿವೇಶನ ನೀಡುವುದು ಸೇರಿದಂತೆ ಪಟ್ಟಣದಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಹೇಳಿದರು.

       ಪುರಸಭೆಯಲ್ಲಿ ಐತಿಹಾಸಿಕ ಗೆಲುವು ತಂದು ಕೊಟ್ಟಿದ್ದಕ್ಕೆ ಕಾರ್ಯಕರ್ತರಿಗೆ ಆತ್ಮ ಸ್ಥೈರ್ಯ ತುಂಬಲು ಸರಳ ವಿಜಯೋತ್ಸವ ಆಚರಿಸುತ್ತಿದ್ದೇವೆ ಎಂದು ತಿಳಿಸಿದರು.

       ಯಾವಾಗಬೇಕಾದರೂ ನನ್ನನ್ನು ಸಂಪರ್ಕಿಸಬಹುದು, ನಿಮ್ಮ ರುಣ ತೀರಿಸಲು ಪ್ರಯತ್ನ ಮಾಡುತ್ತೇನೆ ಎಂದು ಸಚಿವರು ಹೇಳಿದರು. ಹರಿಹರ ವೃತ್ತದಿಂದ ಪ್ರವಾಸಿ ಮಂದಿರ ವೃತ್ತದವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ಜರುಗಿತು. ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಶಿವಯೋಗಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಿ.ಚಂದ್ರಶೇಖರಭಟ್ , ಪುರಸಭಾ ಮಾಜಿ ಅಧ್ಯಕ್ಷ ಎಂ.ರಾಜಶೇಖರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ, ಜಿ.ಪಂ ಸದಸ್ಯ ಎಚ್ .ಬಿ. ಪರಶುರಾಮಪ್ಪ, ಶಶಿಧರ ಪೂಜಾರ, ಸದ್ಯೋಜಾತಯ್ಯ, ಪಿ.ಟಿ.ಭರತ್ ಇತರರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link