ಬೆಂಗಳೂರು
ಮೀಟರ್ ಬಡ್ಡಿಗೆ ಹಣ ನೀಡಿದ್ದ ಸಾಲಗಾರನ ಹಿಂಸೆ ತಾಳಲಾರದೆ ರೈತ ಆತ್ಮಹತ್ಯೆಗೆ ಶರಣಾದ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ದೊಡ್ಡಬಳ್ಳಾಪುರದ ತಪಸ್ಸಿಹಳ್ಳಿಯ ರೈತ ಸುಭಾಷ್ ಚಂದ್ರ (40) ಎಂದು ಆತ್ಮಹತ್ಯೆಗೆ ಶರಣಾದ ರೈತನನ್ನು ಗುರುತಿಸಲಾಗಿದೆ ತಪಸ್ಸಿಹಳ್ಳಿ ಮತ್ತು ಕೋಳೂರು ರಸ್ತೆಯಲ್ಲಿನ ತೋಟಕ್ಕೆಂದು ಮಂಗಳವಾರ ಬೆಳಗ್ಗೆ ಮನೆಯಿಂದ ಹೋದ ಸುಭಾಷ್ ಚಂದ್ರ ಹಲಸಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.ಮೃತ ರೈತ ಸುಭಾಷ್ ಚಂದ್ರ ಹೈನುಗಾರಿಕೆ ಮತ್ತು ವ್ಯವಸಾಯ ಮಾಡುತ್ತಿದ್ದು ಮನೆಯವರಿಗೆ ಗೊತ್ತಿಲ್ಲದೆ 2 ಲಕ್ಷ ಸಾಲ ಮಾಡಿದ್ದರು.
ಸಾಲ ಪಡೆದ 2 ಲಕ್ಷ ಸಾಲಕ್ಕೆ 4 ಲಕ್ಷ ಬಡ್ಡಿಯನ್ನು ಸಂತೋಷ್ ಎಂಬುವವರಿಗೆ ಕೊಡಬೇಕಾಗಿತ್ತು.ವಾರಕ್ಕೆ ಶೇ 10 ಬಡ್ಡಿ ಹಣ ಕೊಡುವುದಾಗಿ ಒಪ್ಪಿ ಸಾಲವನ್ನು ಪಡೆದಿದ್ದರು. ಕೆಲವೇ ತಿಂಗಳಲ್ಲಿ 2 ಲಕ್ಷ ಸಾಲಕ್ಕೆ 4 ಲಕ್ಷ ಬಡ್ಡಿ ಬೆಳೆದಿತ್ತು.ಒಟ್ಟು 6 ಲಕ್ಷ ಹಣ ಕೊಡುವಂತೆ ಸಂತೋಷ್ ಕಿರುಕುಳ ಕೊಡುತ್ತಿದ್ದರು.
ಮನೆಗೆ ಬಂದು ಅವಾಚ್ಯ ಶಬ್ಬಗಳಿಂದ ನಿಂದಿಸಿ ಹಣ ಕೊಡುವಂತೆ ಕಿರುಕುಳ ಕೋಡುತ್ತಿದ್ದರು. ಹಣ ಕೊಡದೇ ಹೋದಲ್ಲಿ ಕೈ ಕಾಲು ಮುರಿಯುವುದಾಗಿ ಎಚ್ಚರಿಕೆಯನ್ನು ನೀಡಿದ್ದರು ಎಂದು ಆರೋಪಿಸಲಾಗಿದೆ.ಯಾವಾಗ ಸಾಲದ ವಿಷಯ ಮನೆಯವರಿಗೂ ಗೊತ್ತಾಯಿತೋ ಸುಭಾಷ್ ಮನಸಿಕವಾಗಿ ಕುಗ್ಗಿ ಹೋಗಿದ್ದರು. ತಮ್ಮನ್ನು ಹಿಂಬಾಲಿಸಿ ಬಂದ ಮಗನನ್ನು ವಾಪಾಸ್ಸು ಕಳುಹಿಸಿ ನೇಣಿಗೆ ಕೊರಳೊಡ್ಡಿದ್ದಾರೆ. ಬಡ್ಡಿ ನೀಡಿದ ಸಂತೋಷ ದಿನಕ್ಕೆ ಇಪ್ಪತ್ತು ಬಾರಿ ಪೆÇೀನ್ ಮಾಡಿ ಹಣಕೊಡುವಂತೆ ಕಿರುಕುಳ ನೀಡುತ್ತಿದ್ದರು. ಇದರಿಂದ ಸಾಕಷ್ಟು ನೊಂದಿದ್ದ ಸುಭಾಷ್ ಚಂದ್ರ ಎರಡು ದಿನ ಹಿಂದೆಯೇ ಆತ್ಮಹತ್ಯೆ ಮಾಡಿಕೊಳ್ಳುದ್ದಾಗಿ ನಿರ್ಧಾರ ಮಾಡಿದ್ದರು.
ಸ್ನೇಹಿತರಿಗೆ ಫೋನ್ ಮಾಡಿ ತಮ್ಮ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಕೇಳಿಕೊಂಡಿದ್ದಾರೆ ಗಾಬರಿಗೊಂಡ ಸ್ನೇಹಿತರು ಸಾಲದ ಹಣ ತೀರಿಸುವ ಭರವಸೆ ನೀಡಿದ್ದಾರೆ. ಮನೆಯವರಿಗೂ ಸುಭಾಷ್ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಹೇಳಿದ ಸ್ನೇಹಿತರು ಜಾಗೃತಿ ವಹಿಸಿದ್ದಾರೆ.
ತೋಟಕ್ಕೆಂದು ಸುಭಾಷ್ ಸುಭಾಷ್ ಚಂದ್ರ ಹೊರಟಾಗ ಆತನ ಮಗ ತಂದೆಯನ್ನೇ ಹಿಂಬಾಲಿಸಿದ್ದಾನೆ. ಹಿಂದೆಯೇ ಬರುತ್ತಿದ್ದ ಮಗನನ್ನ ಬೈಯ್ದು ಸುಭಾಷ್ಚಂದ್ರ ವಾಪಾಸ್ಸು ಕಳಿಸಿದ್ದಾರೆ. ಸುಬಾಷ್ ಚಂದ್ರ ಅವರ ಮಗ ನಿಖಿಲ್ಮನೆಗೆ ಬಂದು ತನ್ನ ತಾಯಿಯನ್ನು ಕರೆದು ಕೊಂಡು ತೋಟಕ್ಕೆ ಹೋಗುವಷ್ಟರಲ್ಲಿ ಹಲಸಿನ ಮರಕ್ಕೆ ನೇಣಿಗೆ ಶರಣಾಗಿದ್ದರು.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಬಡ್ಡಿ ಹಣಕ್ಕಾಗಿ ಕಿರುಕುಳ ಕೊಡುತ್ತಿದ್ದ ಸಂತೋಷನ ಬಂಧನಕ್ಕೆ ಬಲೆ ಬೀಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








