ಬೆಸ್ಕಾಂ ಸಿಬ್ಬಂಧಿಯ ಕರ್ತವ್ಯ ಸಮಾಜಮುಖಿಯಾಗಿರಬೇಕು

ಪ.ನಾ.ಹಳ್ಳಿ

    ನಮ್ಮ ಕರ್ತವ್ಯ ನಿಷ್ಟೆ ಬೆಸ್ಕಾಂ ಗೌರವ ಹೆಚ್ಚಿಸುವಂತಿರಬೇಕು. ನಾವು ಮಾಡುವಂತ ಸೇವೆ ಸಮಾಜ ಮುಖಿಯಾಗಿರಬೇಕು ಪವರ್‍ಮ್ಯಾನ್ ಆಗಿ ಗ್ರಾಮೀಣ ಪ್ರದೇಶದ ಜನರ ಸಮಸ್ಯೆಗಳಿಗೆ ಸ್ಪಂಧಿಸುವ ಮೂಲಕ ಸೇವೆಯಲ್ಲಿ ಸಾರ್ಥಕತೆ ಕಾಣಬೇಕು. ಇತರೆ ರಾಜ್ಯಗಳಲ್ಲಿ ನೆರೆ ಬಂದಾಗ ಅವರ ಸಹಾಯ ಹಸ್ತಚಾಚುವುದು ರಾಷ್ಟ್ರದ ಆಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಪಟ್ಟನಾಯಕನಹಳ್ಳಿ ಬೆಸ್ಕಾಂ ಶಾಖೆಯ ಎಸ್‍ಒ ಮುರಳಿಧರ್ ಹೇಳಿದರು.

      ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಬೆಸ್ಕಾಂ ಶಾಖೆ ಕಛೇರಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಪ್ರವಾಹದಿಂದ ಕಂಗಾಲಾಗಿದ್ದ ಒಡಿಶಾದಲ್ಲಿ ಬೆಸ್ಕಾಂ ತಂಡದೊಂದಿಗೆ ತೆರೆಳಿ ಉತ್ತಮ ಸೇವೆ ಮಾಡಿ ಬಂದ ಪವರ್‍ಮ್ಯಾನ್ ಬೂತರಾಜು ರವರಿಗೆ ಸನ್ಮಾನಿಸಿ ಅವರು ಮಾತನಾಡಿದರು.

       ಒಡಿಶಾದಲ್ಲಿ ಚಂಡ ಮಾರುತ ಮಳೆಯಿಂದ ಸಂಭವಿಸಿದ ಪ್ರವಾಹ ಹಾಗೂ ಬಿರುಗಾಳಿಯಿಂದ 84. ಸಾವಿರ ಕಿಲೋ ಮೀಟರ್ ಉದ್ದಗಲಕ್ಕು ಸಾವಿರಾರು ಕಂಬ ಮತ್ತು ಟ್ರನ್ಸ್‍ಫಾರ್ಮರ್ ಧರೆಗುರಳಿ ವಿದ್ಯುತ್ತ್ ಸಂಪರ್ಕ ಕಡಿತಗೊಂಡಿದ್ದ ಕಾರಣ ಬೆಸ್ಕಾಂ ನೆರೆಯ ರಾಜ್ಯಕ್ಕೆ ಪವರ್‍ಮ್ಯಾನ್‍ಗಳ ತಂಡ ಕಳುಹಿಸುವ ಮೂಲಕ ಅಲ್ಲಿನ ಜನರ ನೈಜ ಜೀವನ ಮರುಕಳಿಸಿವ ಪ್ರಯತ್ನ ಮಾಡಿ ಯಶಸ್ವಿಯಾಯಿತು. ಇಂತಹ ಸೇವೆಗೆ ನಮ್ಮ ಬೆಸ್ಕಾಂ ಶಾಖೆಯಿಂದ ಭೋತರಾಜು ತೆರಳಿ ಸೇವೆ ಮಾಡಿ ಬಂದಿರುವುದು ಮೆಚ್ಚುವಂತಾದ್ದು ಎಂದರು.ಇದೇ ಸಂಧರ್ಭದಲ್ಲಿ ಸೇವಾ ಬಡ್ತಿಹೊಂದಿದ ಪುಷ್ವಲತಾರನ್ನು ಸನ್ಮಾನಿಸಲಾಯಿತು ಬೆಸ್ಕಾಂ ಸಿಬ್ಬಂದಿಗಳಾದ ರಾಮರೆಡ್ಡಿ, ಬಾದಪ್ಪ, ಉಮಾಶಂಕರ್, ಮಹೇಶ್, ಗುಂಡಪ್ಪ, ಧನರಾಜು, ಜಿಜಯಕುಮಾರ, ಚಂದ್ರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link