ಹಗರಿಬೊಮ್ಮನಹಳ್ಳಿ:
ತಾಲೂಕಿನಲ್ಲಿ ಒಟ್ಟು 2ಲಕ್ಷ ಸಸಿಗಳನ್ನು ನೆಡಬೇಕು ಎಂದು ಶಾಸಕ ಎಸ್.ಭೀಮಾನಾಯ್ಕ ಆದೇಶಿಸಿದರು.ತಾಲೂಕಿನ ಮಾಲವಿ ಗ್ರಾಮದಲ್ಲಿ ಅರಣ್ಯ ಇಲಾಖೆಯಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪರಿಸರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಾಲಾ, ಕಾಲೇಜ್, ಎಲ್ಲಾ ವಸತಿ ನಿಲಯಗಳಲ್ಲಿ, ಆರೋಗ್ಯ ಇಲಾಖೆಯ ಕೇಂದ್ರಗಳು ಸೇರಿದಂತೆ ನಮ್ಮ ಗುರಿಯನ್ನು ಸಾಧಿಸಲು ಸಸಿಗಳನ್ನು ನೆಡಬೇಕು. ಇನ್ನೆರಡು ವರ್ಷಗಳಲ್ಲಿ ಕ್ಷೇತ್ರವನ್ನು ಸಂಪೂರ್ಣ ಹಸಿರನ್ನಾಗಿಸಲು ನಿರಂತರ ಪ್ರಯತ್ನಿಸೋಣ ಎಂದರು. ರೈತರು ತಮ್ಮ ಜಮೀನುಗಳಲ್ಲಿ ಸ್ವಯಂ ಪ್ರೇರಿತರಾಗಿ ಸಸಿಗಳನ್ನು ನೆಡಲು ಮುಂದೆ ಬಂದರೆ ಉಚಿತವಾಗಿ ಸಸಿಗಳನ್ನು ನೀಡಲಾಗುವುದು ಎಂದರು.
ಅರಣ್ಯ ಇಲಾಖೆ ಡಿಎಫ್ಓ ಕಿರಣ್, ತಾಪಂ ಇಒ ಮಲ್ಲನಾಯ್ಕ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬುಡ್ಡಿ ಬಸವರಾಜ, ಮಾಲವಿ ಗ್ರಾಪಂ ಅಧ್ಯಕ್ಷ ಕಟಿಗಿ ಬಸಮ್ಮ, ಉಪಾಧ್ಯಕ್ಷ ಹ್ಯಾಳ್ಯ ಚನ್ನಬಸಪ್ಪ, ಸಮಾಜಿಕ ವಲಯ ಆರ್ಎಫ್ಒ ಕಿರಣ ಕುಮಾರ್, ಹಡಗಲಿ ವಿಭಾಗದ ಆರ್ಎಫ್ಒ ರವೀಂದ್ರ ನಾಯ್ಕ, ಜೆಡಿಎಸ್ ತಾಲೂಕು ಅಧ್ಯಕ್ಷ ಬನ್ನಿಗೋಳ ವೆಂಕಣ್ಣ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
