ಚಳ್ಳಕೆರೆ
ಕ್ಷೇತ್ರದ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿರುವ ಶಾಸಕ ಟಿ.ರಘುಮೂರ್ತಿ ಕಲಾವಿದ ಬಗ್ಗೆ ಹಾಗೂ ಸಂಗೀತದ ಬಗ್ಗೆ ಹೆಚ್ಚು ಆಸಕ್ತಿಯನ್ನು ಹೊಂದಿದ್ದು, ಯುವಗಾಯಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಂಗೀತ ಸಂಜೆ ಕಾರ್ಯಕ್ರಮಗಳ ಮೂಲಕ ಯುವ ಗಾಯಕರನ್ನು ಬೆಳಕಿಗೆ ತಂದು ಪ್ರೋತ್ಸಾಹಿಸುತ್ತಿದ್ಧಾರೆ. ಅವರ, ಕಲಾವಿರನ್ನು ಗುರುತಿಸಿ ಗೌರವವಿಸುವ ಕಾರ್ಯ ನಿರಂತರವಾಗಿ ಮುಂದುವರೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ನಗರ ಘಟಕದ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ತಿಳಿಸಿದರು.
ಅವರು, ಸೋಮವಾರ ನಗರದ ಕಿವುಡ ಮತ್ತು ಮೂಗರ ಬೆಳಕು ಶಾಲೆಯಲ್ಲಿ ಶಾಸಕ ಟಿ.ರಘುಮೂರ್ತಿಯವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಗಾನಕೋಗಿಲೆ ಕೆ.ಟಿ.ಮುತ್ತುರಾಜ್ ಅಭಿಮಾನಿ ಬಳಗದಿಂದ ಹಮ್ಮಿಕೊಂಡಿದ್ದ ಸಂಗೀತಾ ಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಗರಸಭಾ ಸದಸ್ಯ ಟಿ.ಮಲ್ಲಿಕಾರ್ಜುನ ಮಾತನಾಡಿ, ಚಳ್ಳಕೆರೆ ಕ್ಷೇತ್ರದ ಇತಿಹಾಸದಲ್ಲಿ ಶಾಸಕ ಟಿ.ರಘುಮೂರ್ತಿಯವರ ಎಲ್ಲಾ ಅಭಿವೃದ್ಧಿ ಕಾರ್ಯಗಳು ಜನರ ಮನ್ನಣೆ ಗಳಿಸಿವೆ. ವಿಶೇಷವಾಗಿ ಇಂಜಿನಿಯರಿಂಗ್ ಕಾಲೇಜು, ಆಸ್ಪತ್ರೆ ನಿರ್ಮಾಣ, ಮಿನಿ ವಿಧಾನಸೌಧ, ಸ್ಟೇಡಿಯಂ ನಿರ್ಮಾಣ, ಜಿಟಿಟಿಸಿ ಕೇಂದ್ರ ಯೋಜನೆಗಳು ಹಾಗೂ ನಗರದ ರಸ್ತೆ ವಿಸ್ತರಣೆ ಜನರಲ್ಲಿ ಹೆಚ್ಚು ವಿಶ್ವಾಸವನ್ನುಂಟು ಮಾಡಿವೆ. ಅವರ 55ನೇ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಯುವ ಗಾಯಕ ಕೆ.ಟಿ.ಮುತ್ತುರಾಜ್ರವರ ಸಂಗೀತ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಲ್ಲಿನ ವಿದ್ಯಾರ್ತಿಗಳು ಪಾಠದ ಜೊತೆಗೆ ಸಂಗೀತದ ಬಗ್ಗೆಯೂ ಆಸಕ್ತಿ ಮೂಡುವಂತಾಗಲಿ ಎಂದು ಈ ಕಾರ್ಯಕ್ರಮ ಆಯೋಜಿಸಿದೆ ಎಂದರು.
ನಗರಸಭಾ ಸದಸ್ಯ ವಿರೂಪಾಕ್ಷ, ನೇತಾಜಿ ಬಳಗದ ಪ್ರಸನ್ನಕುಮಾರ್, ಫರೀಧ್ಖಾನ್, ಗಾಯಕ ಕೆ.ಟಿ.ಮುತ್ತುರಾಜ್ ಎಂ.ಚೇತನ್ಕುಮಾರ್, ಕೆ.ಟಿ.ಓಬಳೇಶ್, ಸ್ವಾಮಿ, ಮುಖ್ಯಶಿಕ್ಷಕ ರಾಮಾಂಜನೇಯ ಮುಂತಾದವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
