ಬೆಂಗಳೂರು:
ಐಎಂಎ ಹಗರಣದ ಪ್ರಮುಖ ಆರೋಪಿ ಐಎಂಎ ಸಂಸ್ಥೆ ಮನ್ಸೂರ್ ಖಾನ್ ಮುಂದಿನ 24 ಗಂಟೆಯೊಳಗೆ ಬೆಂಗಳೂರಿಗೆ ಬರುವುದಾಗಿ ಹೇಳಿದ್ದಾನೆ.
ಆ ಸಂಬಂಧ ‘ಐಎಂಎ ಗ್ರೂಪ್’ ಯೂಟ್ಯೂಬ್ ಚಾನೆಲ್ನಲ್ಲಿ ಅಜ್ಞಾತ ಸ್ಥಳದಿಂದ ವಿಡಿಯೊವೊಂದನ್ನು ಅಪ್ಲೋಡ್ ಮಾಡಿರುವ ಮನ್ಸೂರ್ ಖಾನ್, ‘ನಾನು ಭಾರತಕ್ಕೆ ಬರಲು ಪ್ರಯತ್ನಿಸುತ್ತಿದ್ದೆ. ನನ್ನ ಹೃದಯ ಮತ್ತು ಮಧುಮೇಹದ ಸಮಸ್ಯೆ ಹೆಚ್ಚಾಗಿದ್ದರಿಂದ ಬೆಡ್ ರೆಸ್ಟ್ ನಲ್ಲಿದ್ದೇನೆ. ಹಿಂದಿನ ವಿಡಿಯೋದಲ್ಲಿ ಭಾರತಕ್ಕೆ ಬರುತ್ತೇನೆ ಎಂದಿದ್ದೆ. ನನ್ನ ಹೃದಯದಲ್ಲಿ ಮೂರು ಬ್ಲಾಕ್ ಗಳಿವೆ. ಮಧುಮೇಹದ ಸಮಸ್ಯೆಯೂ ಇದೆ. 24 ಗಂಟೆಗಳೊಳಗೆ ನಾನು ಭಾರತಕ್ಕೆ ಬರುತ್ತೇನೆ. ನನಗೆ ನ್ಯಾಯಾಂಗದ ಬಗ್ಗೆ ಭರವಸೆಯಿದೆ ಎಂದಿದ್ದಾನೆ.
“ಭಾರತದಿಂದ ಬಂದದ್ದು ನನ್ನ ಅತೀ ದೊಡ್ಡ ತಪ್ಪು. ನನಗೆ ಸಮಾಜ ವಿರೋಧಿ ಶಕ್ತಿಗಳು ಮತ್ತು ರಾಜಕಾರಣಿಗಳ ಒತ್ತಡವಿತ್ತು. ಹಾಗಾಗಿ ನಾನು ಭಾರತ ತೊರೆದೆ. ನನ್ನ ಕುಟುಂಬದ ಅವಸ್ಥೆಯೇನು?, ಹೇಗಿದೆ ಎನ್ನುವುದು ನನಗೆ ಗೊತ್ತಿಲ್ಲ. ಸಂಪರ್ಕಕ್ಕೆ ಯಾವ ಮೂಲವೂ ಇಲ್ಲ. ಎಂದು ತಿಳಿಸಿದ್ದಾನೆ
ಬೆಂಗಳೂರಿಗೆ ಬಂದು ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ, ನನ್ನಲ್ಲಿ ಸ್ಥಿರಾಸ್ತಿ ಸಾಕಷ್ಟು ಇದೆ ಎಲ್ಲರೂ ಶಾಂತರೀತಿಯಿಂದ ಇರಿ ಎಲ್ಲರ ಹಣವನ್ನು ವಾಪಸ್ ನೀಡುತ್ತೇನೆ, ನೀವು ಕೊಡುವ ಶಕ್ತಿಯಿಂದಲೇ ನಾನು ಕಾನೂನು ಹೋರಾಟ ಮಾಡುತ್ತೇನೆ. ಹಣ ನೀಡಬೇಕಾದವರು ಯಾರು ಎಂಬ ಬಗ್ಗೆ ಕೆಲ ಮಂದಿಯ ಲಿಸ್ಟ್ ಮಾಡಿದ್ದೇನೆ. ಅವರಿಂದ ಹಣ ಪಡೆದುಕೊಳ್ಳಬಹುದು. ನ್ಯಾಯಾಂಗದ ಸಹಾಯದಿಂದಲೇ ಅವರ ಮೂಲಕ ಹಣ ಪಡೆದು ಸಂಬಂಧಪಟ್ಟವರಿಗೆ ತಲುಪಿಸುತ್ತೇವೆ” ಎಂದು ಮನ್ಸೂರ್ ಖಾನ್ ಹೇಳಿದ್ದಾನೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ