ತುಮಕೂರು
ಕೇಂದ್ರ ಜಲಶಕ್ತಿ ಅಭಿಯಾನ ತಂಡವು ಇಂದು ತುಮಕೂರು ಹಾಗೂ ಚಿಕ್ಕನಾಯನಕಹಳ್ಳಿ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ವಿವಿಧ ಯೋಜನೆಗಳಡಿ ಕೈಗೊಂಡಿರುವ ಜಲರಕ್ಷಣಾ ಕಾಮಗಾರಿಗಳನ್ನು ವೀಕ್ಷಿಸಿತು.
ಜಲಶಕ್ತಿ ಅಭಿಯಾನದ ನೋಡಲ್ ಅಧಿಕಾರಿ ಆರ್.ಕೆ.ಚಂದೋಳಿಯ ನೇತೃತ್ವದ ತಂಡವು ತುಮಕೂರು ತಾಲೂಕು ನಿಡುವಡಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾರಾಯಣಕೆರೆ ಗ್ರಾಮದ ಗೋಕಟ್ಟೆ ಅಭಿವೃದ್ಧಿ ಹಾಗೂ ಕೃಷಿಹೊಂಡ ಕಾಮಗಾರಿ, ಚಿಕ್ಕನಾಯಕನಹಳ್ಳಿ ತಾಲೂಕು ಹೊನ್ನೇಬಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡೇನಹಳ್ಳಿ ಕೆರೆಯ ಹೂಳೆತ್ತುವ ಕಾಮಗಾರಿ, ಕುಪ್ಪೂರು ಗ್ರಾಮದ ಕೃಷಿಹೊಂಡ, ಬೇವಿನಹಳ್ಳಿ ಗ್ರಾಮದ ಕೊಳವೆಬಾವಿ ಮರುಪೂರಣ ಗುಂಡಿ, ಕಂದಿಕೆರೆ ಗ್ರಾಮದಲ್ಲಿರುವ ಕಲ್ಯಾಣಿ ಪುನರುಜ್ಜೀವನ ಕಾಮಗಾರಿ ಸೇರಿದಂತೆ ಮತ್ತಿತರ ಕಾಮಗಾರಿಗಳನ್ನು ವೀಕ್ಷಿಸಿತು.ಈ ಸಂದರ್ಭದಲ್ಲಿ ಜಲಶಕ್ತಿ ಅಧ್ಯಯನ ತಂಡದ ಬಿ.ಪಿ.ಬಿಮಲ್, ಕೆ.ಎ. ನಾಯ್ಡು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿಗಳು, ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
