ಕೊರೊನಾ ಪಾಸಿಟಿವ್ ಇದ್ದವರು ಹೊರಗಡೆ ಬಂದ್ರೆ ಎಫ್ಐರ್!!!

ಮೈಸೂರು : 

      ಕೊರೊನಾ ಸೋಂಕಿತರು ಯಾರಾದ್ರೂ ಹೊರಗಡೆ ಬಂದ್ರೆ ಅವರ ಮೇಲೆ ಎಫ್ ಐಆರ್ ದಾಖಲಾಗುತ್ತದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಎಚ್ಚರಿಕೆ ನೀಡಿದ್ದಾರೆ.

     ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೋವಿಡ್ ಟೆಸ್ಟ್ ಗೆ ಕೊಟ್ಟ ನಂತರ ಅದು ಪಾಸಿಟಿವ್ ಬಂದ ಬಳಿಕ ಜನರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಅಂಥವರ ಲೋಕೇಶನ್ ಪತ್ತೆ ಹಚ್ಚಲು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

      ಇನ್ನು ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಮೇ. 12 ರವರೆಗೆ ಈ ನಿಯಮ ಮುಂದುವರೆಯಲಿದೆ. ಮೇ. 13 ರ ಸಂಜೆ ಮುಂದೆ ಏನ್ ಮಾಡಬೇಕು ಅನ್ನೋದನ್ನು ಸಿಎಂ ಬಿ.ಎಸ್. ಯಡಿಯೂರಪ್ಪ ತೀರ್ಮಾನ ಮಾಡಲಿದ್ದಾರೆ ಎಂದು ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap