ಹುಬ್ಬಳ್ಳಿ : ಕ್ರೈಂ ಅಪ್‌ ಡೇಟ್‌ ……!

ಟ್ರ್ಯಾಕ್ಟರ್‌ಗೆ ಡಿಕ್ಕಿ; ಬೈಕ್ ಸವಾರ ಸಾವು

ಹುಬ್ಬಳ್ಳಿ:

ಕುಂದಗೋಳ ತಾಲ್ಲೂಕಿನ ಸಂಶಿ-ಶಿರೂರು ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಯಲ್ಲಿ ನಿಂತಿದ್ದ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಬಸವರಾಜ ಜಡೆಪ್ಪನವರ (52) ಸಾವನ್ನಪ್ಪಿದ್ದಾರೆ.
ಸಂಶಿ ಗ್ರಾಮದ ಬಸವರಾಜ ಜಡೆಪ್ಪನವರ ಸೋಮವಾರ ರಾತ್ರಿ ಕುಂದಗೋಳದಿಂದ ಸಂಶಿಗೆ ಹೋಗುತ್ತಿದ್ದಾಗ ಘಟನೆ ನಡೆದಿದೆ.ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

ಮಹಿಳೆ ಆತ್ಮಹತ್ಯೆ

ಹುಬ್ಬಳ್ಳಿ:

   ಕುಂದಗೋಳ ತಾಲ್ಲೂಕಿನ ಚಾಕಲಬ್ಬಿ ಗ್ರಾಮದಲ್ಲಿ ಜ್ಯೋತಿ ವಿಲಾಸ ಘಾಟಗೆ (24) ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ನಾಲ್ಕು ವರ್ಷಗಳ ಹಿಂದೆ ಚಾಕಲಬ್ಬಿ ಗ್ರಾಮದ ವಿಲಾಸ ನಾರಾಯಣರಾವ್ ಘಾಟಗೆ ಅವರನ್ನು ಜ್ಯೋತಿ ಮದುವೆಯಾಗಿದ್ದರು.

    ‘ಮದುವೆಯಾದ ನಂತರ ಮಗಳ ಪತಿಯ ಮನೆಯವರು ವರದಕ್ಷಿಣೆ ಹಣ, ಚಿನ್ನಾಭರಣ ತರುವಂತೆ ಕಿರುಕುಳ ನೀಡುತ್ದಿದ್ದರು’ ಎಂದು ಜ್ಯೋತಿ ಅವರ ತಂದೆ ಮಂಜುನಾಥ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಕುಂದಗೋಳ ಠಾಣೆಯ ಸಿಪಿಐ ಶಿವಾನಂದ ಅಂಬಿಗೇರ್ ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap