ಗುಬ್ಬಿ :
ಗ್ರಾಮ ಪಂಚಾಯಿತಿ ಮಟ್ಟದ ಸಭೆಗೆ ಸುಮಾರು 29 ಅಧಿಕಾರಿಗಳಿಗೆ ಮಾಹಿತಿ ನೀಡಿ ಬರಲು ತಿಳಿಸಿದರೆ, ಕೇವಲ 6 ಅಧಿಕಾರಿಗಳು ಮಾತ್ರ ಆಗಮಿಸಿದ್ದು, ಸ್ಥಳೀಯ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದನೆ ಮಾಡುತ್ತಿಲ್ಲ ಎಂಬುದನ್ನು ಎತ್ತಿ ತೋರಿಸಿದ್ದಾರೆ ಎಂದು ಬೆಲವತ್ತ ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರುಗಳು ಕಿಡಿ ಕಾರಿದರು.
ಗುಬ್ಬಿ ತಾಲೂಕಿನ ಕಡಬ ಹೋಬಳಿಯ ಬೆಲವತ್ತ ಗ್ರಾಪಂಯಲ್ಲಿ ಗುರುವಾರ ಕರೆದಿದ್ದ ಸಭೆಗೆ ಬೆಸ್ಕಾಂ, ಅರಣ್ಯ, ಕಂದಾಯ, ತೋಟಗಾರಿಕೆ ಸೇರಿದಂತೆ ಯಾವುದೇ ಅಧಿಕಾರಿಗಳು ಇತ್ತ ತಲೆ ಹಾಕಿಲ್ಲ. ಗ್ರಾಪಂ ಭಾಗದಲ್ಲಿ ಸಾಕಷ್ಟು ವಿದ್ಯುತ್ ಸಮಸ್ಯೆ ಇದೆ, ಇದರ ಬಗ್ಗೆ ಕೇಳಬೇಕು ಅಂದರೆ ಯಾರನ್ನು ಕೇಳುವುದು. ಅಧಿಕಾರಿಗಳೇ ಇಲ್ಲ ಅಂದರೆ ಯಾರು ನಮಗೆ ಉತ್ತರ ನೀಡಬೇಕು ಎಂದು ಸದಸ್ಯರೊಬ್ಬರು ಆಪಾದಿಸಿದರು.
ಕೋವಿಡ್ ಹಿನ್ನಲೆಯಲ್ಲಿ ಮರಣ ಹೊಂದಿರುವವರಿಗೆ ಸರಕಾರ ಒಂದು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದೆ. ಆದರೆ ಇಲ್ಲಿ ಇದರ ಬಗ್ಗೆ ಮಾಹಿತಿ ನೀಡುವ ಒಬ್ಬ ಅಧಿಕಾರಿ ಇಲ್ಲ. ಗ್ರಾಮಸ್ಥರು ನಮ್ಮ ಬಳಿ ಬಂದು ಮಾಹಿತಿ ಕೇಳಿದರೆ ಅವರಿಗೆ ಏನು ಹೇಳಬೇಕು. ಸಭೆಯಲ್ಲಿ ಎಲ್ಲ ಅಧಿಕಾರಿಗಳು ಬರಬೇಕು ಎಂದು ಮಾಹಿತಿ ಇದ್ದರು ಸಹ ಈ ರೀತಿ ಹಳ್ಳಿಗಳ ಮೇಲೆ ಬೇಜಬ್ದಾರಿ ಧೋರಣೆ ತೋರುತ್ತಿರುವುದು ಸರಿಯಲ್ಲ ಎಂದು ಸಭೆಗೆ ಬಾರದ ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತ ಪಡಿಸಿದರು.
ಕಡಬದ ಕೃಷಿ ಇಲಾಖೆಯ ಅಧಿಕಾರಿಯನ್ನು ತರಾಟೆಗೆ ತೆಗೆದು ಕೊಂಡ ಸದಸ್ಯರು ಕೃಷಿ ಟಾರ್ಪಲ್ ಎಲ್ಲರಿಗೂ ತಲುಪುತ್ತಿಲ್ಲ, ನಿಜವಾದ ರೈತರಿಗೆ ಈ ಕುರಿತು ಮಾಹಿತಿಯೆ ಇಲ್ಲ ಸೌಲಭ್ಯಗಳ ಬಗ್ಗೆ ಎಲ್ಲರಿಗೂ ತಿಳಿಸುವುದು ನಿಮ್ಮ ಕರ್ತವ್ಯ ಅಲ್ಲವೆ ಎಂದು ಪ್ರಶ್ನಿಸಿದರು.
ಇನ್ನೂ ಲಸಿಕೆ ವಿಚಾರದಲ್ಲಿ ಸಾಕಷ್ಟು ಹಿನ್ನಡೆಯಾಗಿದ್ದು, ಎಲ್ಲರಿಗೂ ಲಸಿಕೆ ಸಿಗುತ್ತಿಲ್ಲ, ಎಲ್ಲರಿಗೂ ಲಸಿಕೆ ಸಿಗುವಂತೆ ಮಾಡಿ ಎಂದು ಆರೋಗ್ಯ ಅಧಿಕಾರಿಗಳಿಗೆ ಒತ್ತಾಯಿಸಿದರು.
ಕೆಲವು ಭಾಗಗಳ ಅಂಗನವಾಡಿಗಳಲ್ಲಿ ಬಹಳ ಕಡಿಮೆ ಮಟ್ಟದಲ್ಲಿ ಆಹಾರ ಪಾದರ್ಥವನ್ನು ನೀಡಲಾಗುತ್ತಿದೆ ಎಂದು ಮಹಿಳಾ ಮತ್ತು ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ದೂರು ಹೇಳಿಕೊಂಡ ಸದಸ್ಯರು ಸದಸ್ಯರು ಕೊರೋನಾದಿಂದ ಪೆÇೀಷಕರು ಸಾವನ್ನಪ್ಪಿರುವ ಮಕ್ಕಳು ಇದ್ದರೆ ಅವರಿಗೆ ಸರಕಾರದಿಂದ ಎಲ್ಲಾ ರೀತಿಯ ನೆರವು ಕೊಡಿಸಲು ಸಹಕರಿಸುವುದಾಗಿ ತಿಳಿಸಿದರು.
ಗ್ರಾಪಂ ಅಧ್ಯಕ್ಷೆ ರೂಪಕಲಾ ಮಾತನಾಡಿ ಸ್ಥಳೀಯ ಗ್ರಾಪಂ ಸಭೆಗೆ ಬರುವುದಕ್ಕೆ ಅಧಿಕಾರಿಗಳು ತಾತ್ಸರ ಮಾಡಿರುವುದು ಸರಿಯಲ್ಲ. ಇದಕ್ಕೆ ಸಂಬಂಧಿಸಿದಂತೆ ಮೇಲಾಧಿಕಾರಿಗಳಿಗೆ ವರದಿ ನೀಡಲು ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಗ್ರಾಪಂನ ಎಲ್ಲಾ ಸದಸ್ಯರುಗಳು ಹಾಗೂ ಅಭಿವೃದ್ಧಿ ಅಧಿಕಾರಿ ದೇವಿಕಾ ಹಾಗೂ ಶಾಲಾ ಶಿಕ್ಷಕರು ಕೆಲವು ಇಲಾಖಾ ಅಧಿಕಾರಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
