ಬೆಲೆ ಬಾಳುವ ಪರ್ಸ್ ಹಿಂದಿರುಗಿಸಿದ ಜೆರಾಕ್ಸ್ ಅಂಗಡಿ ಮಾಲೀಕರು

ಹುಳಿಯಾರು: 

      ಪ್ರಸ್ತುತ ಸನ್ನಿವೇಶದಲ್ಲಿ ಯಾವುದೇ ವಸ್ತು ನಮ್ಮಿಂದ 1 ಸೆಕೆಂಡ್ ಮಿಸ್ ಆದ್ರೆ ವಾಪಸ್ ಪಡೆಯುವುದು ಅಸಾಧ್ಯ. ಸಿಕ್ಕವರೂ ಸಹ ಕೊಡದೆ ಕ್ಷಣಾರ್ಧದಲ್ಲಿ ಯಾಮಾರಿಸಿ ತೆಗೆದುಕೊಂಡು ಹೋಗುವವರೆ ಹೆಚ್ಚಾಗಿದ್ದಾರೆ.

      ಇದಕ್ಕೆ ಅಪವಾದ ಎನ್ನುವಂತೆ ಹುಳಿಯಾರು ಪಟ್ಟಣದ ಪೊಲೀಸ್ ಠಾಣೆ ಎದುರು ಇರುವ ಖುಷಿ ಜೆರಾಕ್ಸ್ ಅಂಗಡಿಯ ಲತಾ ತಮ್ಮ ಅಂಗಿಡಯಲ್ಲಿ ಗ್ರಾಹಕ ಬಿಟ್ಟು ಹೋಗಿದ್ದ ಪರ್ಸ್ ಹಿಂದುರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

     ಹೌದು, ಹುಳಿಯಾರು ಹೋಬಳಿಯ ಕಲ್ಲೇನಹಳ್ಳಿ ಗ್ರಾಮದ ಗಿರೀಶ್ ಅವರು ತಮ್ಮ ದಾಖಲೆಗಳನ್ನು ಜೆರಾಕ್ಸ್ ಮಾಡಿಸುವ ವೇಳೆ ಪರ್ಸ್ ಬಿಟ್ಟು ಹೋಗಿದ್ದರು. ಗಿರೀಶ್ ಅವರು ಬಹಳ ಸಮಯದ ನಂತರ ಅಂಗಡಿಗೆ ಬಂದಾಗ ಲತಾ ಅವರು ಹಣ ಸೇರಿದಂತೆ ಬೆಲೆಬಾಳುವ ದಾಖಲೆಗಳು ಇರುವ ಪರ್ಸ್ ಅನ್ನು ಅವರಿಗೆ ಹಿಂದಿರುಗಿಸಿದ್ದಾರೆ.

ಭೂಮಿಯ ಮೇಲೆ ಸತ್ಯ, ನ್ಯಾಯ, ನಿಷ್ಠೆ ಏನಾದರೂ ಇನ್ನೂ ಉಳಿದಿದ್ದರೆ ಅದು ಇಂತಹವರಿಂದ ಮಾತ್ರ ಎಂಬುದು ಮತ್ತೊಮ್ಮೆ ಸಾಬೀತಾಗಿದ್ದು, ಪರರ ವಸ್ತು ಪಾಷಣ ಎಂಬುವವರ ಗುಂಪಿಗೆ ಲತಾ ಅವರೂ ಸೇರ್ಪಡೆ ಆಗಿದ್ದಾರೆ ಎಂದು ಗಿರೀಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link