ಬೆಂಗಳೂರು :
ಉದ್ಯೋಗಧಾತರ ಭವಿಷ್ಯನಿಧಿಯಾದ ಪಿ.ಎಫ್ ಖಾತೆಗೂ ಆಧಾರಗೂ ಲಿಂಕ್ ಕಲ್ಪಿಸಲು ಸೆಪ್ಟೆಂಬರ್ 1 ರ ಗಡುವು ನೀಡಲಾಗಿದೆ.
ಇದರಲ್ಲಿ ಉಂಟಾಗಿರುವ ತೊಡಕುಗಳನ್ನು ನಿವಾರಿಸಲು ಕೇಂದ್ರ ಸರ್ಕಾರ ಪ್ರತ್ಯೇಕ ಕಾರ್ಯಪಡೆ ರಚಿಸುವ ನಿರೀಕ್ಷೆ ಇದ್ದು, ಪಿಎಫ್ಗೆ ಆಧಾರ್ ಲಿಂಕ್ ಮಾಡಿಸುವುದು ಕಡ್ಡಾಯವಾಗಿದೆ.
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಈ ಸಂಬಂಧ ಉತ್ತಮ ಮತ್ತು ಕಾರ್ಮಿಕ ಒಕ್ಕೂಟದ ಜೊತೆಗೆ ಮಾತುಕತೆ ನಡೆಸುತ್ತಿದ್ದು, ಅನೇಕ ಕಂಪನಿಗಳು ಆಧಾರ್ಗೂ ಪಿಫ್ ಖಾತೆಯ ಯುಎಎನ್ಗೂ ಲಿಂಕ್ ಕಲ್ಪಿಸುವಲ್ಲಿ ತಾಂತ್ರಿ ಸವಾಲುಗಳನ್ನು ಎದುರಿಸುತ್ತಿವೆ.
ಉದ್ಯೋಗಿಗಳ ಇಪಿಎಫ್ ದಾಖಲಾತಿಗಳಲ್ಲಿನ ವಿವರ ಹಾಗೂ ಆಧಾರ್ ವಿವರಗಳಿಗೂ ಹೊಂದಾಣಿಕೆಯಾಗದಿರುವುದು ಸವಾಲಾಗಿ ಪರಿಣಮಿಸಿದೆ. ಯಾವುದಾದರೂ ಒಂದರಲ್ಲಿ ಹೆಸರು, ಜನ್ಮ ದಿನಾಂಕ, ದೂರವಾಣಿ ಸಂಖ್ಯೆಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಪಿಎಫ್–ಆಧಾರ್ ಲಿಂಕ್ ಆಗುವುದಿಲ್ಲ. ಆಧಾರ್ ಅಥವಾ ಪಿಎಫ್ ದಾಖಲಾತಿಗಳಲ್ಲಿ ತಿದ್ದುಪಡಿ ಮಾಡಿಕೊಂಡು ಲಿಂಕ್ ಮಾಡಬೇಕಾಗುತ್ತದೆ.
ಸಾಮಾಜಿಕ ಭದ್ರತೆ ಕಾಯ್ದೆ 2020 ಅನ್ನು ಸಂಘಟಿತ ಮತ್ತು ಅಸಂಘಟಿತ ವಲಯದ ಎಲ್ಲಾ ಕಾರ್ಮಿಕರಿಗೆ ವಿಸ್ತರಿಸಲು ಸರ್ಕಾರ ಉದ್ದೇಶಿಸಿದೆ. ಇದರ ಪ್ರಕಾರ ಅಸಂಘಟಿತ ವಲಯದ ಕಾರ್ಮಿಕರು ನಾನಾ ಯೋಜನೆಗಳ ಸೌಲಭ್ಯ ಪಡೆಯಲು ಆಧಾರ್ ಸಂಖ್ಯೆ ನೀಡುವುದು ಕಡ್ಡಾಯವಾಗಿದೆ. ಉದ್ಯೋಗಿಯ ಪಿಎಫ್ ಖಾತೆಯನ್ನು ಅಧಾರ್ಗೆ ಲಿಂಕ್ ಕಲ್ಪಿಸುವುದು ಉದ್ಯೋಗಧಾತರ ಜವಾಬ್ದಾರಿಯೂ ಅಗಿದೆ ಎಂದು ಇಪಿಎಫ್ಓ ತಿಳಿಸಿದೆ.
ಪಿಎಫ್ಗೆ ಆಧಾರ್ ಲಿಂಕ್ ಮಾಡುವುದರಿಂದ ಕಲಿ ಖಾತೆಗಳನ್ನು ತಡೆಗಟ್ಟಬಹುದು. ಆದರೆ ತಾಂತ್ರಿಕ ಅಡಚಣೆ ಸವಾಲು ಎದುರಾಗಿದೆ. ಲಕ್ಷಾಂತರ ಮಂದಿ ನೆಯ ಕ್ಷಣ ಆಧಾರ್ ಲಿಂಕ್ ಮಾಡಿದ್ದಾರೆ. ಹಾಗಾಗಿ ಇವುಗಳಿಗೆ ಅನುಮೋದನೆ ನೀಡುವ ಕಾರ್ಯ ಕೂಡ ವಿಳಂಬವಾಗುತ್ತಿದೆ.
ಆದ್ದರಿಂದ ನಿಗದಿತ ಅವಧಿಯೊಳಗೆ ಆಧಾರ್ ಲಿಂಕ್ ಆಗದಿದ್ದರೆ, ಉದ್ಯೋಗಧಾತರ ಪಿಎಫ್ ಪಾಲು ಖಾತೆಗೆ ಜಮೆ ಆಗುವುದಿಲ್ಲ. ಏಕೆಂದರೆ ಸಾಮಾಜಿಕ ಭದ್ರತಾ ಕಾಯ್ದೆ 2020 ಸೆಕ್ಷನ್ 142ರ ಪ್ರಕಾರ, ಉದ್ಯೋಗಧಾತರು ಎಲೆಕ್ಟ್ರಾನಿಕ್ ಚಲನ್ ಕಂ ರಿಟರ್ನ್ (ಇಸಿಆರ್) ಮೂಲಕ ಮಾಸಿಕ ರಿಟರ್ನ್ ಅನ್ನು ಫೈಲ್ ಮಾಡಬೇಕಾಗುತ್ತದೆ. ಇದಕ್ಕೆ ಉದ್ಯೋಗಿಗಳ ಪಿಎಫ್-ಆಧಾರ್ ಲಿಂಕ್ ಮಾಡಲೇಬೇಕಾಗುತ್ತದೆ. ಮೂರನೆಯದಾಗಿ ಲಿಂಕ್ ತಪ್ಪಿದರೆ ಬಡ್ಡಿಯೂ ಜಮೆ ಖಾತೆಗೆ ಆಗುವುದಿಲ್ಲ. ಪ್ರತಿ ತಿಂಗಳ 15 ರಂದು ಪಿಂಚಣಿ ನಿಧಿಯ ಪಾಲು ಜಮೆಯಾಗುತ್ತದೆ. ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಸರ್ಕಾರ ಗಡುವನ್ನು ಜೂ 15 ರಿಂದ ಸೆಪ್ಟೆಂಬರ್ 1ಕ್ಕೆ ಮುಂದೂಡಿದೆ. ಪಿಎಫ್ ಗ್ರಾಹಕರು ತಪ್ಪದೆ ಆನ್ಲೈನ್ ಆಧಾರ್ ಲಿಂಕ್ ಮಾಡಿಸಬೇಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
