ನಿವಾರ್, ಬುರೆವಿ ಬಳಿಕ ತಮಿಳುನಾಡಿಗೆ ‘ಅರ್ನಬ್’ ಚಂಡಮಾರುತದ ಶಾಕ್!!

ಚೆನ್ನೈ: 

     ನಿವಾರ್, ಬುರೆವಿ ಬಳಿಕ ಇದೀಗ ತಮಿಳುನಾಡಿಗೆ ಅರ್ನಬ್ ಚಂಡಮಾರುತದ ಭೀತಿ ಎದುರಾಗಿದೆ.

     ಹಿಂದೂಮಹಾಸಾಗರದಲ್ಲಿ ವಾಯುಭಾರ ಕುಸಿತದಿಂದಾಗಿ ಅರ್ನಬ್​ ಚಂಡಮಾರುತ ಎದ್ದಿದ್ದು, ಇದಾಗಲೇ ಕೇರಳ ಪ್ರವೇಶಿಸಲು ಸಿದ್ಧವಾಗಿರುವ ಚಂಡಮಾರುತ ಕೆಲವೇ ದಿನಗಳಲ್ಲಿ ತಮಿಳುನಾಡು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಈ ಹಿನ್ನೆಲೆಯಲ್ಲಿ ಕೇರಳ ಮತ್ತು ತಮಿಳುನಾಡಿನಲ್ಲಿ ಭೀಕರ ಮಳೆಯಾಗುವ ಸಾಧ್ಯತೆ ಇದ್ದು, ಕರ್ನಾಟಕದ ಮೇಲೂ ಇದು ಪರಿಣಾಮ ಬೀರಲಿದೆ ಎನ್ನಲಾಗಿದೆ.

    ಒಂದರ ಹಿಂದೆ ಒಂದರಂತೆ ತಮಿಳುನಾಡು, ಕೇರಳ, ಆಂಧ್ರಪ್ರದೇಶಗಳಿಗೆ ಈ ತಿಂಗಳಲ್ಲಿ ಚಂಡಮಾರುತ ಅಪ್ಪಳಿಸುತ್ತಲೇ ಇವೆ. ಇದೀಗ ನಿವಾರ್​ ಹಾಗೂ ಬುರೇವಿಯ ಚಂಡಮಾರುತಗಳಿಂದ ಚೇತರಿಸಿಕೊಳ್ಳುತ್ತಿದ್ದ ರಾಜ್ಯಗಳಿಗೆ ಅರ್ನಬ್​ ಶಾಕ್​ ಕೊಡಲಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap