![](http://prajapragathi.com/wp-content/uploads/2019/01/1-8.jpg)
ಕಥಾ ನಾಯಕ ವಿ.ರವಿಚಂದ್ರನ್ ಅವರನ್ನು ಪರಿಚಯಿಸುವ ಈ ಹಾಡಿಗೆ ದರ್ಶನ್ ಮೂಲಕ ಹೆಚ್ಚು ಲಿಫ್ಟ್ ಸಿಕ್ಕಂತಾಗಿದೆ ಎನ್ನುತ್ತಾರೆ ರಮೇಶ್. ಚಿತ್ರದಲ್ಲಿ ಕ್ರೇಜಿ ಸ್ಟಾರ್ ವಕೀಲನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸೋನಿಯ ಅಗರ್ವಾಲ್ ಈ ಹಿಂದೆ ‘ಚಂದು’ ಸಿನಿಮಾದಲ್ಲಿ ನಾಯಕಿ ಆಗಿ ಸುದೀಪ್ ಜೊತೆ ಅಭಿನಯಿಸಿದ್ದರು. ಈ ಚಿತ್ರದಲ್ಲಿ ರವಿಚಂದ್ರನ್ ಅವರಿಗೆ ನಾಯಕಿ. ಮೇಘಶ್ರೀ ಮತ್ತೊಂದು ಮುಖ್ಯ ಪಾತ್ರದಲ್ಲಿದ್ದಾರೆ. ಗುರುಕಿರಣ್ ರಾಗ ಸಂಯೋಜನೆ, ವಿ.ರವಿಚಂದ್ರನ್ ಪೆಟ್ ಛಾಯಾಗ್ರಾಹಕ ಸೀತಾರಾಂ ಜೊತೆಯಾಗಿದ್ದಾರೆ. ಈ ಸಿನಿಮಾ ಫೆಬ್ರವರಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.
![](https://prajapragathi.com/wp-content/uploads/2019/01/1-8.jpg)