ನಕ್ಸಲ್ ಗೆ ಭಾರತೀಯ ಯೋಧನಿಂದ ಜೀವದಾನ !!!

ರಾಂಚಿ:

      ಸಿಆರ್ ಪಿಎಫ್ ಯೋಧನೊಬ್ಬ ಗಾಯಗೊಂಡಿದ್ದ ನಕ್ಸಲ್‌ಗೆ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.

     ಸೈನಿಕರಿಗೂ ಮತ್ತು ನಕ್ಸಲರಿಗೂ ನಡೆದ ಗುಂಡಿನ ಚಕಮಕಿ ವೇಳೆ ನಕ್ಸಲ್‌ನೊಬ್ಬ ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತನಿಗೆ  ತುರ್ತು  B+ ve ಗುಂಪಿನ ರಕ್ತದ ಅವಶ್ಯಕತೆ ಇದೆ ಎಂದು ವೈದ್ಯರು ಹೇಳಿದಾಗ ಒಂದು ಕ್ಷಣ ಕೂಡ ಯೋಚಿಸದ ರಾಜ್ ಕಮಲ್ ತಾನು ರಕ್ತ ನೀಡುವುದಾಗಿ ಹೇಳಿದ್ದಾನೆ.  ಎಂದು ಜಾರ್ಖಂಡ್ ವಲಯ ಸಿಆರ್ ಪಿಎಫ್ ಐಜಿಪಿ ಸಂಜಯ್ ಆನಂದಂ ಲತ್ಕರ್ ಹೇಳಿದ್ದಾರೆ.

       ಜಾರ್ಖಂಡ್ ನ ಖುಂತಿ ಹಾಗೂ ವೆಸ್ಟ್ ಸಿಂಗ್ ಭೂಮ್ ಜಿಲ್ಲಾ ಗಡಿಯಲಿ 209 ಕೋಬ್ರಾ ಪಡೆ ಜನವರಿ 29ರೆಂದು ನಡೆಸಿದ್ದ ಎನ್‍ಕೌಂಟರ್ ನಲ್ಲಿ ನಕ್ಸಲ್‍ಗೆ ಗಾಯವಾಗಿತ್ತು. ಆ ವೇಳೆ ಭದ್ರತಾ ಪಡೆಯ ಯೋಧರೇ ಅವನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಎನ್ ಕೌಂಟರ್ ವೇಳೆ ಐವರು ನಕ್ಸಲರು ಸತ್ತಿದ್ದರೆ ಇಬ್ಬರು ನಕ್ಸಲರು ಗಾಯಗೊಂಡಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap