ಫಿರೋಜ್ ಷಾ ಕೋಟ್ಲಾ ಸ್ಟೇಡಿಯಂ ಈಗ ಅರುಣ್‌ ಜೇಟ್ಲಿ ಸ್ಟೇಡಿಯಂ!!

ನವದೆಹಲಿ:

       ಕೇಂದ್ರದ ಮಾಜಿ ಹಣಕಾಸು ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ದಿವಂಗತ ಅರುಣ್​ ಜೇಟ್ಲಿ ಅವರ ಸ್ಮರಣಾರ್ಥವಾಗಿ ನವದೆಹಲಿಯಲ್ಲಿರುವ ಫಿರೋಜ್ ಷಾ ಕೋಟ್ಲಾ ಮೈದಾನಕ್ಕೆ ಇವರ ಹೆಸರು ಇಡಲು ನಿರ್ಧಾರ ಮಾಡಲಾಗಿದೆ.

      ರಾಜಕಾರಣಿಯಾಗಿದ್ದರೂ ಕ್ರಿಕೆಟ್‌ ಪ್ರೇಮಿಯಾಗಿದ್ದ ಅರುಣ್‌ ಜೇಟ್ಲಿ, ದಿಲ್ಲಿ ಕ್ರಿಕೆಟ್‌ ಅಸೋಸಿಯೇಷನ್‌ ಅಧ್ಯಕ್ಷರಾಗಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಅಲ್ಲದೇ ದಿಲ್ಲಿ ಕ್ರಿಕೆಟ್‌ ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ಯಶಸ್ವಿಯಾಗಿದ್ದರು.

      ವಿರಾಟ್​ ಕೊಹ್ಲಿ, ಗೌತಮ್​ ಗಂಭೀರ್​, ವಿರೇಂದ್ರ ಸೆಹ್ವಾಗ್​​, ಆಶಿಸ್​ ನೆಹ್ರಾ, ರಿಷಭ್​ ಪಂತ್​ ಸೇರಿದಂತೆ ಅನೇಕ ಪ್ರತಿಭೆಗಳಿಗೆ ಟೀಂ ಇಂಡಿಯಾ ತಂಡಕ್ಕೆ ಸೇರಿಕೊಳ್ಳಲು ಅರುಣ್ ಜೇಟ್ಲಿ ಅವಕಾಶ ನೀಡಿದ್ದರು ಎಂದು ಡೆಲ್ಲಿ ಡಿಸ್ಟ್ರಿಕ್ಟ್​ ಕ್ರಿಕೆಟ್​ ಅಸೋಸಿಯೇಷನ್​ ಅಧ್ಯಕ್ಷ ರಜತ್​ ಶರ್ಮಾ ತಿಳಿಸಿದ್ದಾರೆ.

       ಈಗ ಅವರ ಸ್ಮರಣಾರ್ಥ ನವದೆಹಲಿಯ ಜನಪ್ರಿಯ ಫಿರೋಜ್‌ ಶಾ ಮೈದಾನವನ್ನು ಅರುಣ್‌ ಜೇಟ್ಲಿ ಸ್ಟೇಡಿಯಂ ಎಂದು ಮರುನಾಮಕರಣ ಮಾಡಲಾಗುವುದು ಎಂದು ದಿಲ್ಲಿ ಕ್ರಿಕೆಟ್‌ ಅಸೋಸಿಯೇಷನ್‌ ತಿಳಿಸಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link