ನವದೆಹಲಿ :
ಕಂದಾಯ ಇಲಾಖೆ ಅಧಿಕಾರಿಯೊಬ್ಬರು ಕೊರೊನಾವೈರಸ್ ಸೋಂಕು ಹರಡುವ ಭೀತಿಯಿಂದ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
56 ವರ್ಷ ವಯಸ್ಸಿನ ವ್ಯಕ್ತಿ ದೆಹಲಿಯ ದ್ವಾರಕಾ ಪ್ರದೇಶದಲ್ಲಿ ಕಾರಿನೊಳಗೆ ಆ್ಯಸಿಡ್ ತರಹದ ದ್ರಾವಣವನ್ನು ಕುಡಿದು ಅಧಿಕಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕಾರಿನೊಳಗೆ ಡೆತ್ ನೋಟ್ ಕೂಡ ಸಿಕ್ಕಿದ್ದು, ‘ನನ್ನಿಂದ ನನ್ನ ಕುಟುಂಬದವರಿಗೆ ಕೊರೊನಾ ಸೋಂಕು ಹರಡುವುದು ಬೇಡ, ನನ್ನಿಂದಾಗಿ ಅವರು ಬಳಲುವುದು ಬೇಡ’ ಎಂದು ಬರೆದಿದ್ದಾರೆ.
ಒಂದು ವಾರದ ಹಿಂದೆ ಮೃತ IRS ಅಧಿಕಾರಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು. ವರದಿ ನೆಗಟಿವ್ ಬಂದಿತ್ತು. ಆದರೂ ಕೂಡ ತನ್ನಿಂದಾಗಿ ಮಹಾಮಾರಿ ತನ್ನ ಕುಟುಂಬದವರಿಗೆ ಅಂಟುವುದು ಬೇಡ ಅಂತಾ ಈ ನಿರ್ಧಾರ ಮಾಡಿದ್ದಾರೆ ಎಂದು ದಕ್ಷಿಣ ದ್ವಾರಕಾ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
