ಭೂಸೇನಾ ಮುಖ್ಯಸ್ಥರಾಗಿ ಮನೋಜ್ ಮುಕುಂದ್ ನರವಣೆ ನೇಮಕ!!

ನವದೆಹಲಿ: 

      ಲೆಫ್ಟಿನೆಂಟ್ ಜನರಲ್ ಮನೋಜ್ ಮುಕುಂದ್ ನರವಣೆ ಅವರು ಭೂಸೇನಾ ಮುಖ್ಯಸ್ಥರಾಗಿ ರಾವತ್ ಅವರಿಂದ ಮಂಗಳವಾರ ಅಧಿಕಾರ ವಹಿಸಿಕೊಂಡಿದ್ದಾರೆ.

      ಹಾಲಿ ಸೇನಾ ಮುಖ್ಯಸ್ಥ ಜ.ರಾವತ್ ರವರು ಇಂದು(ಮಂಗಳವಾರ) ನಿವೃತ್ತರಾಗಲಿದ್ದು, ಅವರ ಸ್ಥಾನಕ್ಕೆ ಲೆ.ಜ.ಮನೋಜ್ ನೇಮಕಗೊಂಡಿದ್ದಾರೆ.

      ಲೆ.ಜ.ನರವಣೆ ಅವರು ಇದಕ್ಕೂ ಮುನ್ನ ಭೂಸೇನೆಯ ವೈಸ್ ಚೀಫ್ ಆಗಿ ಜವಾಬ್ದಾರಿ ನಿಭಾಯಿಸುತ್ತಿದ್ದರು. ಭಾರತ–ಚೀನಾದ 4,000 ಕಿಮೀ ಗಡಿಭಾಗದಲ್ಲಿ ಇವರ ನೇತೃತ್ವದಲ್ಲೇ ಈಸ್ಟರ್ನ್ ಕಮ್ಯಾಂಡ್ ವಿಭಾಗದ ಸೇನಾ ಪಡೆಗಳು ನಿಯೋಜನೆಗೊಂಡಿವೆ.

      ಸೇನೆಯಲ್ಲಿ 37 ವರ್ಷ ಸೇವೆಯ ಅನುಭವ ಹೊಂದಿರುವ ಲೆ.ಜ.ಮನೋಜ್ ಈ ಅವಧಿಯಲ್ಲಿ ಚೀನಾ ಗಡಿ, ಕಾಶ್ಮೀರ, ಈಶಾನ್ಯ ರಾಜ್ಯಗಳಲ್ಲಿ ಮಹತ್ವದ ಹುದ್ದೆ ನಿರ್ವಹಿಸಿದ್ದಾರೆ. ಇವರಿಗೆ ಈಗಾಗಲೇ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಠ ಸೇವಾ ಪದಕಗಳು ಸಂದಿವೆ.

     ಇನ್ನು ಭೂಸೇನೆಯ ಮುಖ್ಯಸ್ಥರಾಗಿದ್ದ ರಾವತ್ ಅವರು ನೂತನವಾಗಿ ರಚಿತವಾಗಿರುವ ರಕ್ಷಣಾ ಪಡೆಗಳ ಮುಖ್ಯಸ್ಥರ ಸ್ಥಾನ ಅಲಂಕರಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap