‘ನಿಖಿಲ್​ ಎಲ್ಲಿದ್ದೀಯಪ್ಪ’ ಎಂದರೆ ‘ನಮ್ಮ ಹೃದಯದಲ್ಲಿ ಅನ್ನಿ : ಸಿಎಂ ಎಚ್.ಡಿ.ಕುಮಾರಸ್ವಾಮಿ

ಮಂಡ್ಯ :

   ‘ನಿಖಿಲ್​ ಎಲ್ಲಿದೀಯಪ್ಪಾ?’ ಡೈಲಾಗ್​. ಸಾಮಾಜಿಕ ಜಾಲತಾಣದಲ್ಲಿ ಹೊಸ ಟ್ರೆಂಡ್​ ಸೃಷ್ಟಿಸಿದ ಈ ಡೈಲಾಗ್​ ಹಿಡಿದು ಮಂಡ್ಯ ಅಭ್ಯರ್ಥಿ ಟ್ರೋಲ್​ಗೆ ಒಳಗಾಗಿದ್ದರು. ಈ ಕುರಿತು ಮೊದಲ ಬಾರಿ ಪ್ರತಿಕ್ರಿಯಿಸಿರುವ ಸಿಎಂ ಕುಮಾರಸ್ವಾಮಿ, ನಿಖಿಲ್​ ಎಲ್ಲಿದೀಯಪ್ಪ ಎಂದು ಯಾರಾದ್ರೂ ಕೇಳಿದ್ರೆ ಈ ರೀತಿ ಉತ್ತರ ಕೊಡಿ ಎಂದು ಜನರಿಗೆ ತಿಳಿಸಿದ್ದಾರೆ.

ಕೆ.ಆರ್​ನಗರದ ನಾರಾಯಣಪುರ ಗ್ರಾಮದಲ್ಲಿ ಪ್ರಚಾರ ನಡೆಸಿದ ಅವರು, ಯಾರಾದರೂ ‘ನಿಖಿಲ್​ ಎಲ್ಲಿದ್ದಿಯಪ್ಪ ಎಂದರೆ, ನಮ್ಮ ಹೃದಯದಲ್ಲಿದ್ದಾನೆ’ ಎಂದು ಹೇಳಬೇಕು ಎಂದು  ಪಾಠ ಹೇಳಿಕೊಟ್ಟರು. ಗ್ರಾಮಕ್ಕೆ ಸಿಎಂ ತೆರಳಿದ ವೇಳೆ ‘ನಿಖಿಲ್ ಎಲ್ಲಿದೀಯಪ್ಪಾ’ ಎಂದು ಬಹಳ ಚರ್ಚೆಯಾಗ್ತಿದೆ ಈ ಬಗ್ಗೆ ಮಾತನಾಡಿ ಎಂದು ಊರಿನ ಯುವಕರು ಸಿಎಂಗೆ ಆಗ್ರಹಿಸಿದಾಗ ಅವರು ಹೀಗೆ ಹೇಳಿದರು.

‘ನಿಖಿಲ್​ ಎಲ್ಲಿದ್ಯಾಪ್ಪ’ ಎನ್ನುವ  ಡೈಲಾಗ್​​  ಇಟ್ಟುಕೊಂಡು ಕೆಲ ಕಿಡಿಗೇಡಿಗಳು ಟ್ರೋಲ್​ ಮಾಡುತ್ತಿದ್ದಾರೆ. ಈ ಟ್ರೋಲ್​ಗಳಿಗೆಲ್ಲಾ ಜನರು ತಲೆಕೆಡಿಸಿಕೊಳ್ಳಬಾರದು. ಈ ವಿಷಯಗಳನ್ನು ಟ್ರೋಲ್​ ಮಾಡುವ ಮೂಲಕ ಕೆಲವರು ಕೆಟ್ಟ ಅಭಿರುಚಿ ಬೆಳಸಿಕೊಂಡು ಸಮಾಜವನ್ನು ಹಾಳು ಮಾಡುತ್ತಿದ್ದಾರೆ. ಅವರಿಗೆ ನೀವು ತಕ್ಕ ಉತ್ತರ ನೀಡಬೇಕು. ನಿಖಿಲ್​ ಎಲ್ಲಿದ್ಯಾಪ್ಪ ಎಂದ್ರೆ ನಿಮ್ಮ ಹೃದಯದಲ್ಲಿ ಎಂದು ಹೇಳಿ ಎಂದು ಟ್ರೋಲಿಗರ ವಿರುದ್ಧ ಹರಿಹಾಯ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap