ಆಂಧ್ರ ಪ್ರದೇಶ:
ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಪರಸ್ಪರ ಮಾರಾಮಾರಿ ನಡೆದಿದ್ದು, ಘಟನೆಯಿಂದ ಇಬ್ಬರು ಕಾರ್ಯಕರ್ತರು ಹತರಾಗಿರುವ ಘಟನೆ ವರದಿಯಾಗಿವೆ.
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪಿಠಾಪುರದಲ್ಲಿ ಮತಗಟ್ಟೆಯ ಬಳಿ (Telugu Desam Party ) ಹಾಗೂ ವೈಎಸ್ಆರ್ಸಿಪಿ(YSR Congress Party) ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ.
ತೊಡಿಪತ್ರಿ ಮತಗಟ್ಟೆ ಸಮೀಪ ಮತ ಚಲಾವಣೆಗೆಂದು ಹೊರಗಿನಿಂದ ಬಂದ ಟಿಡಿಪಿಯ ಕಾರ್ಯಕರ್ತರನನ್ನು ವೈಎಸ್ಆರ್ ಕಾಂಗ್ರೆಸ್ ಕಾರ್ಯಕರ್ತರು ತಡೆದು ಪ್ರಶ್ನಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಟಿಡಿಪಿ ಕಾರ್ಯಕರ್ತರು ವೈಎಸ್ಆರ್ ಕಾಂಗ್ರೆಸ್ ಕಾರ್ಯಕರ್ತರ ಪ್ರಶ್ನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಎರಡು ಪಕ್ಷಗಳ ನಡುವೆ ಮಾತಿಗೆ ಮಾತು ಬೆಳದು, ಕೈ ಕೈ ಮಿಲಾಯಿಸಿದ್ದಾರೆ. ಮತಗಟ್ಟೆಯ ಬಳಿ ಮಚ್ಚು-ಲಾಂಗುಗಳಿಂದ ನಡೆದ ಘರ್ಷಣೆಯಲ್ಲಿ ತೀವ್ರ ಗಾಯಗೊಂಡಿದ್ದ ಟಿಡಿಪಿ ಕಾರ್ಯಕರ್ತ ಸಿದ್ದಾ ಭಾಸ್ಕರ್ ರೆಡ್ಡಿ ಮತ್ತು ವೈಸಿಪಿ ಕಾರ್ಯಕರ್ತ ಪುಲ್ಲಾರೆಡ್ಡಿ ಮೃತರಾಗಿದ್ದಾರೆ ಎನ್ನಲಾಗಿದೆ.
ಪೊಲೀಸರು ಹೊಡೆದಾಟವನ್ನು ನಿಯಂತ್ರಿಸಿ, ಕೆಲವರನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಘಟನೆ ಖಂಡಿಸಿರುವ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದ್ದಾರೆ.
![](https://prajapragathi.com/wp-content/uploads/2018/12/suicide_3068456_835x547-m-1.gif)