ಮಧುಗಿರಿ: ಬೋನಿಗೆ ಬಿದ್ದ ಕರಡಿ….!

ಮಧುಗಿರಿ :

    ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಕರಡಿಯೊಂದು ಸೆರೆ ಸಿಕ್ಕಿದೆ.ತಾಲ್ಲೂಕಿನ ಮಿಡಗೇಶಿ ಹೋಬಳಿಯ ಮಲ್ಲನಾಯಕನ ಹಳ್ಳಿ ಗ್ರಾಮದ ಕೆರೆಯಾಂಗಲದ ಸಮೀಪದ ಜಮೀನಿನಲ್ಲಿ ಇಟ್ಟಿದ್ದ ಬೋನಿಗೆ ಮಂಗಳವಾರ ಮಧ್ಯ ರಾತ್ರಿ ಗಂಡು ಕರಡಿ ಸೆರೆಯಾಗಿದೆ.

    ಇತ್ತೀಚೆಗೆ ಕರಡಿಯು ಅಕ್ಕಾ ಪಕ್ಕಾದ ಜಮೀನುಗಳಲ್ಲಿ ವೇಳೆಯಲ್ಲದ ವೇಳೆಯಲ್ಲಿ ಪ್ರತ್ಯಕ್ಷ ವಾಗುತ್ತಿತ್ತು ಕರಡಿಯಿಂದ ಭಯ ಭೀತರಾಗಿದ್ದ ಗ್ರಾಮಸ್ಥರು ಕರಡಿಯನ್ನು ಸರೆ ಹಿಡಿಯುವಂತೆ ಅರಣ್ಯಾಧಿಕಾರಿಗಳನ್ನು ಆಗ್ರಹಿಸಿದ್ದರು.

    ಸರೆ ಸಿಕ್ಕ ಕರಡಿಯನ್ನು ಬನ್ನೇರುಘಟ್ಟ ಜೈವಿಕ ಉದ್ಯಾವನಕ್ಕೆ ಕಳುಹಿಸಿ ಕೊಡಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ.ಕಾರ್ಯಾಚರಣೆಯಲ್ಲಿ ಉಪ ವಲಯಾರಣ್ಯಾಧಿಕಾರಿ ಮುತ್ತುರಾಜು ಪ್ರದೀಪ್ , ಶ್ರೀಧರ್ , ಶಿವರಾಜು , ಕೃಷ್ಣಮೂರ್ತಿ , ರಘು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap