ಬ್ಯಾಡಗಿ:
ಪ್ರೋತ್ಸಾಹದ ಕೊರತೆಯಿಂದ ಸಾಧಕನಜೊತೆ ಸಂಗೀತದ ಸಾಧನೆಯೂ ನಶಿಸುತ್ತಿರುವುದು ದುರದೃಷ್ಟಕರ ಪಾಶ್ಚಾತ್ಯ ಸಂಗೀತದ ಮೋಹಕ್ಕೆ ಬಲಿಯಾಗುತ್ತಿರುವಇತ್ತೀಚಿನಯುವಕರು ಸಮಾಜದ ಸ್ವಾಸ್ಥವನ್ನು ಹಾಳು ಮಾಡುತ್ತಿದ್ದು ಸುಗಮ ಸಂಗೀತವನ್ನು ಕೇಳಲು ಹಿಂಜರಿಯುತ್ತಿದ್ದಾರೆಎಂದುಬ್ಯಾಡಗಿಯ ವರ್ತಕರ ಕಲಾ ಮತ್ತು ವಾಣಿಜ್ಯ ಮಹಾ ವಿದ್ಯಾಲಯದ ಪ್ರಾಂಶುಪಾಲ ಪ್ರೋ . ಕೆ . ಜಿಖಂಡಿ ಬಾಗೂರ ಅಭಿಪ್ರಾಯಪಟ್ಟರು.
ಪಟ್ಟಣದ ವರ್ತಕರ ಕಲಾ ಮತ್ತು ವಾಣಿಜ್ಯ ಮಹಾ ವಿಧ್ಯಾಲಯದ ಸಭಾ ಭವನದಲ್ಲಿ ದಶಮಾನೋತ್ಸವ ಅಂಗವಾಗಿ ರೋಟರಿ ಸಂಸ್ಥೆ ಎರ್ಪಡಿಸಿದ್ದ ತಾಲೂಕ ಮಟ್ಟದ ಗಾಯನ ಹಾಗೂ ನೃತ್ಯ ಸ್ಪರ್ಧೇಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕತೆಯ ಹೆಸರಿನಲ್ಲಿ ಇಂದಿನ ಯುವಜನಾಂಗಧಾರ್ಮಿಕ ಕಾರ್ಯಗಳ ಆಚರಣೆಯಿಂದದೂರ ಉಳಿಯುತ್ತಿದ್ದಾರೆ.
ಇದರಿಂದ ಸಂಸ್ಕತಿಯು ನಶಿಸುತ್ತಿದ್ದು ಸಂಸ್ಕಾರಯುತ ಮಾನವೀಯ ಮೌಲ್ಯಗಳು ಮರೆಯಾಗುತ್ತಿವೆಎಂದರಲ್ಲದೇಜನಪದ ಗೀತೆಗಳು, ದೇಶಿ ಕಲೆಗಳು, ಹಾಗೂ ಸುಗಮ ಸಂಗೀತ ಕಾರ್ಯಕ್ರಮಗಳು ದೇಶದ ಸಂಸ್ಕತಿಯನ್ನು ಜೀವಂತವಾಗಿಡಲು ಪ್ರಯತ್ನಿಸುತ್ತಿವೆಯಲ್ಲದೇ ಸಂಸ್ಕಾರಯುತ ಸಮಾಜದ ನಿರ್ಮಾಣಕ್ಕೆ ಸಹಾಯಕವಾಗಲಿವೆ ಎಂದರು.
ವರ್ತಕ ಪರಶುರಾಮ ಮೇಲಗಿರಿಮಾತನಾಡಿ, ಸಂಗೀತವೆಂಬುದು ತಪಸ್ಸಿದ್ದಂತೆ ನೊಂದ ಮನಸ್ಸಿಗೆ ಚೈತನ್ಯ ನೀಡುವ ಶಕ್ತಿ ಸಂಗೀತಕ್ಕಿದೆ, ಆದರೆ ಪಾಶ್ಚಾತ್ಯ ಸಂಸ್ಕತಿಯತ್ತ ಮುಖ ಮಾಡಿರುವ ನಾವೆಲ್ಲರೂ ನಮ್ಮ ದೇಶೀಯ ಸಂಗೀತವನ್ನು ಮರೆಯುತ್ತಿದ್ದು ಸಾಧಕನ ಸಾವಿನ ಜೊತೆಗೆ ಸಾಧನೆ ನಶಿಸಲಿದೆ, ಇದರಿಂದ ಸಂಗೀತವೆಂಬುದು ನಮ್ಮೆಲ್ಲರ ಮಧ್ಯೆ ಕಳೆದುಹೋಗುತ್ತಿದೆ ಎಂದು ವಿಷಾದಿಸಿದರು.
ಈ ಸಂದರ್ಬದಲ್ಲಿಸ್ಪರ್ಧೇಗಳಲ್ಲಿ ಭಾಗವಹಿಸಿದ ಮತ್ತು ವಿಜೇತಮಕ್ಕಳಿಗೆ ಪ್ರಮಾಣ ಪತ್ರಮತ್ತುನಗದು ಬಹುಮಾನಗಳನ್ನು ವಿತರಿಸಲಾಯಿತು. ಮಂಜುನಾಥಉಪ್ಪಾರ ಸ್ವಾಗತಿಸಿದರು.ಸಂದ್ಯಾರಾಣಿಕಾರ್ಯಕ್ರಮ ನಿರೂಪಿಸಿದರು.ಬಸವರಾಜ ಸುಂಕಾಪೂರ ವಂದಿಸಿದರು.ಕಾರ್ಯಕ್ರಮದಅಧ್ಯಕ್ಷೆತೆಯನ್ನುರೋಟರಿ ಸಂಸ್ಥೆಯಅಧ್ಯಕ್ಷಎಸ.ಎಸ್ ಶೆಟ್ಟರವಹಿಸಿ ದ್ದರು.ಶಂಭುಲಿಂಗಪ್ಪಕಾಯಕದ, ತಿರಕಪ್ಪ ಹಡಪದ, ಸಂಗೀತಕಲಾವಿದರಾದ ನಾಗರಾಜಕಾಯಕದ, ಕರಬಸಪ್ಪ ಮಾವಿನತೋಪ, ಮಂಜು ಮುಂಡರಗಿ, ರಾಜು ಪಾಟೀಲ, ಶಿವನಗೌಡ್ರ ಪಾಟೀಲ ಸೇರಿದಂತೆಇನ್ನಿತರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
