ಬೆಂಗಳೂರು
ಬಸವನಗುಡಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವೀಲ್ಹಿಂಗ್ ಮಾಡುತ್ತಿದ್ದ ದ್ವಿಚಕ್ರ ವಾಹನ ಸವಾರರಾದ ಇರ್ಷಾದ್(24), ಉಮ್ರಾಜ್(24), ರವಿಕುಮಾರ್(24), ಅಲಿ(20), ದ್ರಾವಿಡ್(21), ಪ್ರಶಾಂತ್(21) ರಂಜಿತ್(21), ರೆಹಮಾನ್ಖಾನ್, ಸೈಯದ್ ಸುಲ್ತಾನ್, ಅರ್ಜುನ್(26), ಮರಿಲಿಂಗ(21), ಶೇಖ್ ವಾಜೀದ್ ದರ್ಶನ್ ಸೇರಿದಂತೆ ಇನ್ನಿಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದವರ ವಿರುದ್ದ ಕ್ರಮ ಕೈಗೊಳ್ಳಲಾಗಿದೆ.
ಪ್ರಕರಣಗಳನ್ನು ದಾಖಲಿಸಿದ ಎಲ್ಲಾ ದ್ವಿಚಕ್ರ ವಾಹನ ಸವಾರರನ್ನು ವಿಶೇಷ ಕಾರ್ಯ ನಿರ್ವಾಹಕ ದಂಡಾಧಿಕಾರಿಗಳ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಮನವಿಯನ್ನು ಪುರಸ್ಕರಿಸಿದ ದಂಡಾಧಿಕಾರಿಗಳು, ದೋಷಪೂರಿತ ಸೈಲೆನ್ಸರ್ಗಳನ್ನು ಅಳವಡಿಸಿಕೊಂಡಿರುವ ಸವಾರರಿಗೆ 50 ಸಾವಿರ ರೂ. ಮೊತ್ತಕ್ಕೆ 6 ತಿಂಗಳ ಅವಧಿಗೆ ವೈಯಕ್ತಿಕ ಮುಚ್ಚಳಿಕೆಯನ್ನು ಪಡೆದು ಹಾಗೂ ವೀಲ್ಹಿಂಗ್ ಮಾಡುತ್ತಿದ್ದ ಸವಾರರಿಗೆ 2 ಲಕ್ಷ ರೂ. ಮೊತ್ತಕ್ಕೆ 6 ಅವಧಿಗೆ ವೈಯಕ್ತಿಕ ಮುಚ್ಚಳಿಕೆಯನ್ನು ಪಡೆದು ಸಾರ್ವಜನಿಕರ ನೆಮ್ಮದಿಗೆ ಭಂಗವನ್ನುಂಟು ಮಾಡದಂತೆ ಸದ್ವರ್ತನೆಯಿಂದ ನಡೆದುಕೊಳ್ಳಬೇಕೆಂದು ಸೂಚಿಸಿ ಆದೇಶಿಸಿರುತ್ತಾರೆ.
ಮುಂದಿನ ದಿನಗಳಲ್ಲಿ ಇದೇ ರೀತಿ ಸಾರ್ವಜನಿಕರ ನೆಮ್ಮದಿಗೆ ಭಂಗವನ್ನುಂಟು ಮಾಡುವ ಉಲ್ಲಂಘನೆಗಳನ್ನು ಪುನಾರವರ್ತನೆ ಮಾಡಿದಲ್ಲಿ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿ ಸೂಕ್ತ ಕಾನೂನು ರಿತ್ಯಾ ಕ್ರಮ ಜರುಗಿಸುವಲಾಗುವುದು ಎಂದು ಎಚ್ಚರಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
