ಬೆಂಕಿ ಆಕಸ್ಮಿಕ : 9 ಮೇವಿನ ಬಣವೆ ನಾಶ..!!

ಗುತ್ತಲ :

     ಸಮೀಪದ ಬಮ್ಮನಕಟ್ಟಿ ಗ್ರಾಮದಲ್ಲಿ ಬುಧವಾರ ಆಕಸ್ಮಿಕ ಬೆಂಕಿ ತಗುಲಿ ಮೇವಿನ ಬಣವೆಗಳು ಬೆಂಕಿಗೆ ಆಹುತಿಯಾಗಿವೆ ಘಟನೆ ನಡೆದಿದೆ.ಆಕಸ್ಮಿಕ ಬೆಂಕಿಗೆ ಸುಮಾರು 9 ಮೇವಿನ ಬಣವೆಗಳು ಪೂರ್ಣ ಸುಟ್ಟು ಕರಕಲಾಗಿವೆ. ಸುಟ್ಟ ಬಣವೆಗಳ ಮೊತ್ತ ಸುಮಾರು ಮೂರು ಲಕ್ಷಕ್ಕೂ ಅಧಿಕ ಪ್ರಮಾಣದ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

      ಬೆಂಕಿಗೆ ಆಹುತಿಯಾದ ಮೇವಿನ ಬಣವೆಗಳು ಪರಶುರಾಮ ರಿತ್ತಿ, ತಿರಕಪ್ಪ ಮಾಳಾಪುರ ಎಂಬುವವಗೆ ಸೇರಿದ ಬಣವೆಗಳಾಗಿವೆ. ಘಟನಾ ಸ್ಥಳಕ್ಕೆ ಕೃಷಿ ಸಹಾಯಕ ನಿರ್ದೇಶಕ ಕರಿಯಲ್ಲಪ್ಪ ಕೊರಚರ, ಕಂದಾಯ ಇಲಾಖೆ ಉಪತಹಶೀಲ್ದಾರ ರವಿ ಕೊರವರ, ಗ್ರಾಮ ಲೆಕ್ಕಾಧಿಕಾರಿ, ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಕೃಷಿ ಇಲಾಖೆ ಸಿಬ್ಬಂದಿಗಳಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

 

Recent Articles

spot_img

Related Stories

Share via
Copy link