ಮರಳು ದಂಧೆಕೋರರ ಬಂಧನ

ಬೆಂಗಳೂರು:
       ಸರ್ಕಾರದ ನಿಷೇಧದ ನಡುವೆಯು ನಮ್ಮ ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆಯಿಂದ ರಾಜ್ಯದ ಎಷ್ಟೋ ಕೆರೆಗಳು ಬತ್ತಿಹೋಗಿವೆ ಆದರು ಅದರಿಂದ ಬರುವ ಲಾಭಕ್ಕಾಗಿ ಕೆರೆಯಿಂದ ಮರಳನ್ನು ಅಕ್ರಮವಾಗಿ ತೆಗೆದು ಸಾಗಿಸುತ್ತಿದ್ದ ಇಬ್ಬರು ಕಳ್ಳರನ್ನು ಬೆಂಗಳೂರು ಪೋಲೀಸರು ಮಾಲು ಸಮೇತ ಬಂಧಿಸಿದ್ದಾರೆ.
       ಶನಿವಾರ ಬೆಳಿಗ್ಗೆ ಮುಗಳೂರು ಕೆರೆ ಸಮೀಪದಲ್ಲಿ ಮರಳು ತೆಗೆಯುತ್ತಿರುವುದನ್ನು ಗಮನಿಸಿದ ಕೆಲ ಸ್ಥಳೀಯರು ಅನಿಲ್ ಕುಮಾರ್ ಹಾಗೂ ಇತರರು ಈ ಸಂಬಂಧ ಪೋಲೀಸರಿಗೆ ಮಾಹಿತಿ ನೀಡಿದ್ದು ತಕ್ಷಣ ಸ್ಥಳಕ್ಕೆ ಆಗಮಿಸಿದ ಪೋಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link