
ಅರ್ಜುನ್ ಸರ್ಜಾ ವಿರುದ್ಧದ ಮೀ ಟೂ ಆರೋಪ ಹಿಂದೂ ವಿರೋಧಿ ಸಂಚಿನ ಒಂದು ಭಾಗ. ಸರ್ಜಾ ಅವರು ಚೆನ್ನೈನಲ್ಲಿ 25 ಕೋಟಿ ವೆಚ್ಚದ ಹನುಮಾನ್ ಮಂದಿರ ನಿರ್ಮಿಸುತ್ತಿದ್ದು, ಇದನ್ನು ಕ್ರೈಸ್ತ ಮಿಷನರಿಗಳು ಸೇರಿ ಹಲವರು ವಿರೋಧಿಸುತ್ತಿದ್ದಾರೆ. ಆ ಜಾಲದ ಕುಮ್ಮಕ್ಕಿನಿಂದಲೇ ಕಮ್ಯುನಿಸ್ಟ್ ಮನಸ್ಥಿತಿಯ ಶ್ರುತಿ ಹರಿಹರನ್ ‘ದೇಶದ್ರೋಹ’ದ ಕೆಲಸದಲ್ಲಿ ಭಾಗಿಯಾಗಿದ್ದಾರೆ.
ಇದಕ್ಕೆ ಇಬ್ಬರು ಸ್ಟಾರ್ ನಟರ ಬೆಂಬಲವೂ ಇದೆ ಎಂದು ಸರ್ಜಾ ಆಪ್ತ ಪ್ರಶಾಂತ್ ಸಂಬರಗಿ ಗಂಭೀರ ಆರೋಪ ಮಾಡಿದ್ದಾರೆ. ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಮೇಲೆ ಶ್ರುತಿ ಹರಿಹರನ್ ಮಾಡಿರುವ ಮೀಟೂ ಆರೋಪದ ಹಿಂದೆ ಹಿಂದೂ ವಿರೋಧಿ ಮನಸ್ಸುಗಳು ಕೆಲಸ ಮಾಡುತ್ತಿವೆ. ಇವರ ಸಂಚುಗಳಿಗೆ ಮೀಟೂ ಅಭಿಮಾನ ಬಳಕೆ ಆಗುತ್ತಿದೆ ಎಂದು ಅರ್ಜುನ್ ಸರ್ಜಾ ಆಪ್ತ ಪ್ರಶಾಂತ್ ಸಂಬರಗಿ ಗಂಭೀರವಾಗಿ ಆರೋಪಿಸಿದ್ದಾರೆ. ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕರೆದಿದ್ದ ಮೀಟೂ ಸಂಧಾನ ಸಭೆಗೆ ಆಗಮಿಸಿದ್ದ ಪ್ರಶಾಂತ್ ಸಂಬರಗಿ ಸಭೆ ಆರಂಭವಾಗುವುದಕ್ಕೂ ಮುನ್ನ ಈ ಕುರಿತು ಮಾತನಾಡಿದರು. ಅರ್ಜುನ್ ಸರ್ಜಾ ಆಂಜನೇಯನ ಪರಮ ಭಕ್ತರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
