ಹಗರಿಬೊಮ್ಮನಹಳ್ಳಿ:

ತಾಲೂಕಿನ ವಲ್ಲಾಭಾಪುರದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಬಳ್ಳಾರಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ನಿತೀಶ್ರವರು ಬುಧವಾರ ದಿಢೀರ್ ಭೇಟಿ ನೀಡಿ, ಅಡುಗೆ ಸುಧಾರಿಸುವ ಬಗ್ಗೆ ತಯಾರಕರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಜರುಗಿದೆ.
ತಾಲೂಕಿನ ವಿವಿಧ ಗ್ರಾ.ಪಂ.ಗಳ ಪರಿಶೀಲನೆಗೆಂದು ಆಗಮಿಸಿದ್ದ ಅವರು, ಈ ಶಾಲೆಗೂ ಭೇಟಿ ನೀಡಿದರು. ಆ ಸಂದರ್ಭದಲ್ಲಿ ಊಟಕ್ಕೆ ಕುಳಿತಿದ್ದ ವಿದ್ಯಾರ್ಥಿಗಳನ್ನು ಮಾತನಾಡಿಸಿ, ನಂತರ ಪರಿಶೀಲಿಸದರು. ಅನ್ನ ಸರಿಯಾಗಿ ಬೇಯಿಸದ ಕಾರಣ, ನೀವು ನಿಮ್ಮ ಮಕ್ಕಳಿಗೆ ಇಂತಹದೇ ಅನ್ನವನ್ನು ಕೊಡುತ್ತೀರ ಎಂದು ರೇಗಿದರಲ್ಲದೆ, ಅಡುಗೆ ತಯಾರಕರು ತಲೆಗೂ ಸೇರಿದಂತೆ ರಕ್ಷಣಾ ಬಟ್ಟೆ(ಕವಚ)ಗಳನ್ನು ತೊಟ್ಟಿರದ ಕಾರಣ ಅವರನ್ನು ತರಾಟೆಗೆ ತೆಗೆದುಕೊಂಡರು.
ನಂತರ ಅಡುಗೆ ಕೊಠಡಿಯನ್ನು ಮತ್ತು ಅಡುಗೆ ಪದಾರ್ಥಗಳ ಸಂಗ್ರಹ ಕೊಠಡಿಗಳನ್ನು ಪರಿಶೀಲಿಸಿದರು. ತರಕಾರಿ ಸೇರಿದಂತೆ ಇತರೆ ಪದಾರ್ಥಗಳು ಎಲ್ಲೆಂದರಲ್ಲಿ ಮತ್ತು ಸುರಕ್ಷಿತವಾಗಿಡದನ್ನು ಕಂಡ ಸಿ.ಇ.ಒ ಅವರು ಇದಕ್ಕೆ ಮುಖ್ಯಕಾರಣ ರಾಗಿರುವ ಬಸಯ್ಯನನ್ನು ಸಾಧ್ಯವಾದರೆ ಕೆಲಸದಿಂದ ತೆಗೆಯಿರಿ ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ತಾ.ಪಂ.ಇಒ ವಿಶ್ವನಾಥ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಡಾ||ದಿನೇಶ್, ತಾ.ಪಂ.ಯೋಜನಾಧಿಕಾರಿ ಉಮೇಶ್ಗೌಡ, ಪಿಡಿಒ ಹುಚ್ಚಪ್ಪ, ವಸತಿ ಶಾಲೆಯ ವಾರ್ಡನ್ ಸೇರಿದಂತೆ ಶಿಕ್ಷಕರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
