ಹಾವೇರಿ:
ಹೊರರಾಜ್ಯದಿಂದ ಬಂದು ನಗರದಲ್ಲಿ ಬೀದಿ ಬದಿಯಲ್ಲಿ ಸಣ್ಣ-ಪುಟ್ಟ ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗಳಿಗೆ ನಗರದ ಜೈನ್ ಸಮುದಾಯದಿಂದ ಅಗತ್ಯ ವಸ್ತುಗಳನ್ನು ವಿತರಣೆ ಮಾಡಲಾಯಿತು. ಇಲ್ಲಿನ ದಾನೇಶ್ವರಿ ನಗರ, ಹಾನಗಲ್ಲ ರಸ್ತೆ, ಹುಬ್ಬಳ್ಳಿ ರಸ್ತೆಯಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ಉತ್ತರಪ್ರದೇಶ, ಆಂದ್ರ ಪ್ರದೇಶದಿಂದ ವ್ಯಾಪಾರ ಸಲುವಾಗಿ ಬಂದಿರುವಂತಹ ಕುಟುಂಬ ಮಕ್ಕಳಿಗೆ ಮಾಸ್ಕ್ ಚಪಾತಿ ಹಿಟ್ಟು ಅಕ್ಕಿ ಸೋಪು ಎಣ್ಣೆ ತೊಗರಿ ಬೇಳೆ ಕಡ್ಲೆಬೇಳೆ ಸೋಪು ಕೊಬ್ಬರಿಎಣ್ಣೆ ದಿನನಿತ್ಯದ ವಸ್ತುಗಳನ್ನು ವಿತರಣೆ ಮಾಡಿದರು. ದೇವು ಜೈನ್ ನೇತೃತ್ವದಲ್ಲಿ ಸಮುದಾಯದ ಯುವಕರು ಹಾಗೂ ಬಿಜೆಪಿ ಮುಖಂಡ ಪ್ರಭು ಹಿಟ್ನಳ್ಳಿ ಸೇರಿದಂತೆ ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
