ತುರುವೇಕೆರೆ:
ದೇಶದಲ್ಲಿ ಯುಪಿಎ ಮೈತ್ರಿಕೋಟ ಅಧಿಕಾರಕ್ಕೆ ಬಂದರೆ ಮಾಜಿ ಪ್ರಧಾನಿ ದೇವೇಗೌಡರೇ ಪ್ರದಾನಿ ಪಕ್ಷ ಭೇದ ಮರೆತು ಅವರ ಗೆಲುವಿಗೆ ಶ್ರಮಿಸಬೇಕೆಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.ಪಟ್ಟಣದ ತಮ್ಮ ನಿವಾಸದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯನ್ನು ದ್ದೇಶಿಸಿ ಮಾತನಾಡಿದ ಅವರು ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ದಿ ದಿಸೆಯಲ್ಲೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಇಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವುದು ಸಂತಸದ ಸಂಗತಿ.
ಕಾಂಗ್ರೆಸ್-ಜೆಡಿಎಸ್ನ ಒಮ್ಮತದ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ದೇವೇಗೌಡರು ಸೋಮವಾರ ಮದ್ಯಾಹ್ನ 3ಗಂಟೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ಅವರ ಅಭ್ಯರ್ಥಿತನವನ್ನು ಜಿಲ್ಲೆಯ ಜನತೆ ತುಂಬು ಹೃದಯದಿಂದ ಸ್ವಾಗತಿಸುತ್ತಿದ್ದಾರೆ. ಮಾಜಿ ಪ್ರಧಾನಿಯೊಬ್ಬರಿಗೆ ಮತಹಾಕುವ ಸೌಭಾಗ್ಯ ಒಂದು ಅಪೂರ್ವ ಅವಕಾಶ ಜಿಲ್ಲೆಯ ಜನತೆಗೆ ದೊರಕಿರುವುದು ಸಂತಸದ ಸಂಗತಿ. ಈ ನಿಟ್ಟಿನಲ್ಲಿ ಮೈತ್ರಿ ಅನ್ವಯ ತಾಲೂಕಿನ ಎಲ್ಲಾ ಕಾಂಗ್ರೆಸ್ಸಿಗರನ್ನು ಹಾಗೂ ಜೆಡಿಎಸ್ ಮುಖಂಡರನ್ನು ಸಹಮತಕ್ಕೆ ಪಡೆಯುವ ದಿಸೆಯಲ್ಲಿ ಪ್ರಯತ್ನ ಸಾಗಿದೆ ಎಂದರು.
ಜಿಲ್ಲೆಯ ಹೇಮಾವತಿ ವಿಚಾರ ಕುರಿತಂತೆ ದೇವೇಗೌಡರ ಬಗೆಗೆ ಜಿ.ಎಸ್.ಬಸವರಾಜುರವರು ವಯಕ್ತಿಕ ನಿಂದನೆಗೆ ಮುಂದಾಗಿದ್ದಾರೆ. ಇದು ಸಲ್ಲದು, ರಾಜಕಾರಣಕ್ಕಾಗಿ ಇಂತಹ ಸುಳ್ಳುಗಳು ಬೇಡ, ರಾಜ್ಯದ ಜನತೆಗೆ ಗೊತ್ತಿರುವಂತೆ ಹೆಚ್.ಡಿ.ದೇವೇಗೌಡರು 1983ರಲ್ಲಿ ತುಮಕೂರು ಜಿಲ್ಲಾ ನಾಲಕಾಮಗಾರಿಗೆ 300ಕೋಟಿ ಬಿಡುಗಡೆಗೊಳಿಸಲಿಲ್ಲವೆಂದು ಅಂದಿನ ಮುಖ್ಯಮಂತ್ರಿ ರಾಮಕೃಷ್ಣಹೆಗಡೆರವರಿಗೆ ರಾಜಿನಾಮೆ ಸಲ್ಲಿಸಿ ಪದವಿ ತ್ಯಾಗ ಮಾಡಿದ್ದರು ಈ ಎಲ್ಲಾ ಸಂಗತಿಗಳನ್ನು ಹಿರಿಯರಾದ ಮಾಜಿ ಸಂಸದ ಜಿ.ಎಸ್.ಬಸವರಾಜು ಮರೆತಿದ್ದಾರೆ ಎಂಬುದನ್ನು ನೆನಪಿಸಲಿಚ್ಚಿಸುತ್ತೇನೆ. ಸೋಮವಾರದ ನಾಮಪತ್ರ ಸಲ್ಲಿಕೆ ಹಾಗೂ ರ್ಯಾಲಿಯಲ್ಲಿ ಪಾಲ್ಗೊಳ್ಳಲು ತಾಲೂಕಿನಿಂದ ಸಹಸ್ರಾರು ಮಂದಿ ಮುಖಂಡರು, ಕಾರ್ಯಕರ್ತರು ಭಾಗವಹಿಸಬೇಕೆಂದು ಸಂಧರ್ಭದಲ್ಲಿ ಮನವಿ ಮಾಡಿದರು.
ಗೋಷ್ಠಿಯಲ್ಲಿ ಪಕ್ಷದ ಅಧ್ಯಕ್ಷ ಸ್ವಾಮಿ, ಮುಖಂಡರುಗಳಾದ ಎ.ಬಿ.ಜಗದೀಶ್, ರಾಜೀವ್ಕೃಷ್ಣಪ್ಪ, ಕೋಳಾಲಗಂಗಾಧರ್, ವಿಜಯೇಂದ್ರಕುಮಾರ್, ಕುಶಾಲ್ಕುಮಾರ್, ಡಿ.ಸಿ.ಕುಮಾರ್, ರೇಣುಕಯ್ಯ, ರಾಜುಗೌಡ, ಎನ್,ಆರ್,ಸುರೇಶ್, ಶಿವಾನಂದ್, ಅಫ್ಜಲ್, ರಾಮಚಂದ್ರು, ಮೊದಲಾದವರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
