ಮಹಾನ್ ವ್ಯಕ್ತಿಗಳು ಹಳ್ಳಿಯಲ್ಲೇ ಓದಿರುವವರು:ಅರ್ಜುನ್ ದೇವಯ್ಯ

ಹೊಳಲ್ಕೆರೆ:

      ಮಹಾನ್ ವ್ಯಕ್ತಿಗಳು ಹಳ್ಳಿಯಲ್ಲೇ ಓದಿರುವವರು. ಮಕ್ಕಳೇ ಹಳ್ಳಿಯನ್ನು ಮರೆತರೆ ಎಂದು ಉದ್ದಾರ ಆಗುವುದಿಲ್ಲ. ಹಳ್ಳಿಯಿಂದ ದಿಲ್ಲಿ ಉದ್ದಾರ ಆಗಿರುವುದು. ದಿಲ್ಲಿಯಿಂದ ಹಳ್ಳಿ ಉದ್ದಾರ ಆಗಿಲ್ಲ ಎಂದು ಅಂತರಾಷ್ಟ್ರೀಯ ಅಥೆಲೆಟಿಕ್ ಚಾಂಪಿಯನ್ ಅರ್ಜುನ್ ದೇವಯ್ಯ ತಿಳಿಸಿದರು.

         ಪಟ್ಟಣದ ಶಿಕ್ಷಕರ ಸದನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ತರಳಬಾಳು ನೌಕರರ ಕ್ಷೇಮಾಭಿವೃಧ್ದಿ ಸಂಘ, ಹಾಗೂ ನಾಗಾರ್ಜುನ ವಸತಿಯುತ ಪದವಿಪೂರ್ವ ಕಾಲೇಜು ಚಿಕ್ಕಬಳ್ಳಾಪುರ ಇವರ ಸಂಯುಕ್ತಾಶ್ರಯದಲ್ಲಿ ಎಸ್ಸೆಸೆಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣೆ ಹಾಗೂ ವಿದ್ಯಾರ್ಥಿಗಳಿಗೆ ಅರಿವು, ಆತ್ಮಸ್ಥೈರ್ಯ ತುಂಬುವ ವಿಶೇಷ ಕಾರ್ಯಗಾರ ಕುರಿತು ಮಾತನಾಡಿದರು.ಕನ್ನಡ ಅಳಿವು ಆಗವುದು ಶಿಕ್ಷಣದಿಂದ ಅಲ್ಲ. ಪಟ್ಟಣದಲ್ಲಾಗಲಿ ಮನೆಯಲ್ಲಾಗಲಿ ಕನ್ನಡ ಮಾತನಾಡದೆ ಇದ್ದರೆ ಕನ್ನಡ ಅಳಿದು ಹೋಗುತ್ತದೆ ಎಂದರು.

         ನಿಮ್ಮ ಯಶಸ್ಸಿಗೆ ಇಡೀ ಬ್ರಹ್ಮಾಂಡವೇ ಕಾರಣವಾಗಿರುತ್ತದೆ. ನಮ್ಮ ಸೋಲಿಗೆ ನಾವೇ ಕಾರಣ. ನಮ್ಮ ಚಂಚಲ ಮನಸ್ಸಿನಿಂದ ನಿಗ್ರಹಿಸದೇ ಸೋಲಿರುತ್ತೇವೆ. ಆದರೆ ಪೋಷಕರಿಗಾಗಲಿ ಶಿಕ್ಷಕರಿಗಾಗಲಿ, ಶಾಲೆಗಾಗಲಿ ದೂರಬೇಡಿ. ಅವರ ಪ್ರಯತ್ನ ಅವರು ಮಾಡಿರುತ್ತಾರೆ. ಮಕ್ಕಳಲ್ಲಿ ಆತ್ಮ ಸ್ಥೈರ್ಯ ಇರಬೇಕು ಎಂದರು.ಮಕ್ಕಳ ನಿಶ್ಯಬ್ದತೆ ಕಾಪಾಡಲು ಮಕ್ಕಳು ಮಧ್ಯದಲ್ಲಿ ಹೋಗಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.

         ಪರೀಕ್ಷೆ ಎನ್ನುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನ ಘಟ್ಟದಲ್ಲಿ ಮಹತ್ತರವಾದ ಮೈಲುಗಲ್ಲು. ಪ್ರತಿಯೊಬ್ಬ ಮಕ್ಕಳು ಪರೀಕ್ಷೆಯಲ್ಲಿ ಜಯಗಳಿಸಲಿ ಎನ್ನುವುದು ಪೋಷಕರ ಆಸೆ. ಕೇವಲ ಅಂಕ ಗಳಿಸುವುದು ಅಲ್ಲ ಮಾನಸಿಕವಾಗಿ, ದೈಹಿಕವಾಗಿ ಪರೀಕ್ಷೆಯ ಸಮಯದಲ್ಲಿ ತೊಡಗಿಸಿಕೊಳ್ಳುತ್ತಾನೆ ಮತ್ತು ಮನಸ್ಸಿನ ಚಂಚಲತೆಯನ್ನು ಹೋಗಲಾಡಿಸಿ ಏಕಾಗ್ತೆಯನ್ನು ನಿಟ್ಟಸುತ್ತಾರೆ ಎಂಬುದರ ಮೇಲೆ ವಿದ್ಯಾರ್ಥಿ ಭವಿಷ್ಯ ಅಡಗಿರುತ್ತದೆ. ಯಾವುದೇ ಮಕ್ಕಳಿಗೆ ಏಕಾಗ್ರತೆ ಮತ್ತು ಜ್ಞಾಪಕ ಶಕ್ತಿಯ ಕೊರತೆ ಖಂಡಿತಾ ಇರುವುದಿಲ್ಲ. ಮಕ್ಕಳು ಓದಿನ ಮೇಲೆ ಆಸಕ್ತಿ ವಹಿಸಬೇಕು. ಸಮಯ ಪ್ರಜ್ಞೆ ಇರಬೇಕು, ಓದುವ ವೇಳಾಪಟ್ಟಿ ಹಾಕಿಕೊಳ್ಳಬೇಕು ಎಂದು ಸಲಹೆ ನೀಡಿದರು.

        ಈ ಸಂದರ್ಭದಲ್ಲಿ ಬಿಇಓ ಜಗದೀಶ್, ನಾಗಾರ್ಜುನ ವಸತಿಯುತ ಪದವಿಪೂರ್ವ ಕಾಲೇಜು ಚಿಕ್ಕಬಳ್ಳಾಪುರಿನ ಪ್ರಾಂಶುಪಾಲರಾದ ನಂಜುಂಡಪ್ಪ, ತರಳಬಾಳು ಕ್ಷೇಮಾಭಿವೃಧ್ದಿ ಸಂಘದ ಅಧ್ಯಕ್ಷ ಜಿ.ಎಂ.ಶಿವಪ್ಪ ಮತ್ತು ಖಜಾಂಚಿ ಜಿ.ಎಸ್.ವೇದಮೂರ್ತಿ ಮಾತನಾಡಿದರು.
ಕ.ಸಾ.ಪ ನಿಕಟಪೂರ್ವ ಅಧ್ಯಕ್ಷ ಎಂ.ಜಿ.ವೆಂಕಟೇಶ್, ಇಸಿಓ ಮಂಜುನಾಥ್, ತರಳಬಾಳು ಕ್ಷೇಮಾಭಿವೃಧ್ದಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link