ಹೊಳಗುಂದಿ ಶಾಲೆಯಲ್ಲಿ ಬೇಸಿಗೆ ಸಂಭ್ರಮಕ್ಕೆ ಚಾಲನೆ

ಹೂವಿನಹಡಗಲಿ :
 
         ವಿದ್ಯಾರ್ಥಿಗಳು ಓದಿನ ಜೊತೆಗೆ ರಜೆಯ ಮೋಜು ಅನುಭವಿಸಲು “ಬೇಸಿಗೆ ಸಂಭ್ರಮ” ಎಂಬ ವಿನೂತನ ಕಾರ್ಯಕ್ರಮವನ್ನು ಶಿಕ್ಷಣ ಇಲಾಖೆ ಜಾರಿಗೊಳಿಸಿದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಹೆಚ್.ಕೆ.ಚಂದ್ರಪ್ಪ ತಿಳಿಸಿದರು. 
        ತಾಲೂಕಿನ ಹೊಳಗುಂದಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಬೇಸಿಗೆ-ಸಂಭ್ರಮ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಐದುವಾರಗಳ ಕಾಲ ನಡೆಯುವ ವಿಶೇಷ ಶಿಬಿರದಲ್ಲಿ ಕುಟುಂಬ, ಜಲಸಾಕ್ಷರತೆ, ಪರಿಸರ ಆರೋಗ್ಯ ಮತ್ತು ನೈರ್ಮಲ್ಯ ಕುರಿತು ಮಕ್ಕಳಿಗೆ ಜಾಗೃತಿ ಮೂಡಿಸಲಾಗುವುದು, ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳ ಬೌಧಿಕ ವಿಕಸನದ ಜೊತೆಗೆ ಅವರ ಸರ್ವಾಂಗೀಣ ಪ್ರಗತಿಗೆ ಕಾರ್ಯಕ್ರಮ ಸಹಕರಿಯಾಗಲಿದೆ ಎಂದರು.
        ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಪರಮೇಶ್ವರಪ್ಪ, ಮಾತನಾಡಿ ಮಕ್ಕಳಿಗೆ ಗಣಿತ ವಿಷಯ ಕಷ್ಟವೆಂದು ಪರಿಗಣಿಸಲಿದ್ದು, ಈ ಶಿಬಿರದಲ್ಲಿ ಪ್ರತಿದಿನ ಮೋಜಿನ ಗಣಿತದ ಚಟುವಟಿಕೆಗಳನ್ನು ಮೂಡಿಸುವ ಮೂಲಕ ಪ್ರತಿದಿನ ಮಗು ಕಾರ್ಯಯೋಜನೆ ಚಟುವಟಿಕೆಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದ ಅವರು, ಮಕ್ಕಳ, ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗುವ ವಿಷಯಗಳನ್ನು ಬೇಸಿಗೆ ಶಿಬಿರದಲ್ಲಿ ಕಲಿಸಿಕೊಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಎಲ್ಲಾ ಮಕ್ಕಳು ಶಿಬಿರದ ಪ್ರಯೋಜನ ಪಡೆಯಬೇಕೆಂದು ಹೇಳಿದರು. 
   
         ಸಂಪನ್ಮೂಲವ್ಯಕ್ತಿ, ಮಂಜುನಾಥ ಶಿಲ್ಪಿ, ಮುಖ್ಯಶಿಕ್ಷಕಿ ಕೌಶಲ್ಯ ದೇವೇಂದ್ರನಾಯ್ಕ, ಶಾಲೆಯ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸಿದರು. 
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link