ಬೆಂಗಳೂರು
ನನಗೆ ಸಾಯಬೇಕು ಎನಿಸಿದ್ದು, ಸಾಯುತ್ತಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ ಎನ್ನುವ ಪತ್ರ ಡೆತ್ ನೋಟ್ಬರೆದಿಟ್ಟು ಬಟ್ಟೆ ವ್ಯಾಪಾರಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಂದಿನಿ ಲೇಔಟ್ನ 3ನೇ ಬ್ಲಾಕ್ನಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಬಟ್ಟೆ ವ್ಯಾಪಾರಿಯನ್ನು ನಂದಿನಿ ಲೇಔಟ್ನ 3ನೇ ಬ್ಲಾಕ್ನ ಡಾ. ರಾಜ್ ಸಮಾಧಿ ಬಳಿ ವಾಸಿಸುತ್ತಿದ್ದ ಮಂಜುನಾಥ್ (26)ಎಂದು ಗುರುತಿಸಲಾಗಿದೆ.ಬಟ್ಟೆ ವ್ಯಾಪಾರ ಮಾಡುತ್ತಿದ್ದ ಮಂಜುನಾಥ್ ಜೀವನದಲ್ಲಿ ಜಿಗುಪ್ಸೆ ಹೊಂದಿ, ನನ್ನ ಸಾವಿಗೆ ಯಾರೂ ಕಾರಣರಲ್ಲ, ಸಾಯಬೇಕೆನಿಸಿದ್ದರಿಂದ ವಿಷ ಕುಡಿಯುತ್ತಿದ್ದೇನೆ ಎಂದು ಪತ್ರ ಬರೆದಿಟ್ಟಿದ್ದ ಅಸ್ವಸ್ಥನಾಗಿದ್ದ ಆತನನ್ನು ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ಚೌಡೇಶ್ವರಿ ನಗರದ ಲಿಟಲ್ ಸ್ಕೂಲ್ ಬಳಿ ವಾಸಿಸುತ್ತಿದ್ದ ರಾಘವೇಂದ್ರ (25) ಎಂಬುವವರು ಜೀವನದಲ್ಲಿನ ಜಿಗುಪ್ಸೆಯಿಂದ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವೆರಡೂ ಪ್ರಕರಣಗಳನ್ನೂ ದಾಖಲಿಸಿರುವ ನಂದಿನಿ ಲೇಔಟ್ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ