ಹಾನಗಲ್ಲ
ಭಾರತ ಬಂದ್ನ ಎರಡೆನೇ ದಿನವಾದ ಇಂದು ಹಾನಗಲ್ಲಿನಲ್ಲಿ ಕೆಎಸ್ಆರ್ಟಿಸಿ ಬಸ್ಸುಗಳ ಸಂಚಾರ ಆರಂಭಗೊಂಡು, ಎಲ್ಲ ಅಂಗಡಿ ಮುಂಗಟ್ಟುಗಳು ಯಥಾವತ್ತಾಗಿ ತಮ್ಮ ವಹಿವಾಟುಗನಡೆಸಿದವು.ಬುಧವಾರ ಬೆಳಿಗ್ಗೆ ಯಾವದೇ ಬಸ್ಸುಗಳು ಬೀದಿಗಿಳಿದಿರಲಿಲ್ಲ. 10 ಘಂಟೆಯ ನಂತರ ಒಂದೊಂದರಂತೆ ಬಸ್ಸುಗಳು ತಮ್ಮ ಕಾರ್ಯ ನಿರ್ವಹಿಸಿದವು. ಹಾನಗಲ್ಲಿನಲ್ಲಿ ವ್ಯಾಪಾರ ವಹಿವಾಟುಗಳು ಯಥಾಸ್ಥಿತಿಯಲ್ಲಿದ್ದರೂ ಬ್ಯಾಂಕುಗಳು ಹಾಗೂ ಅಂಚೆ ಕಛೇರಿ ಕಾರ್ಯ ನಿರ್ವಹಿಸಲಿಲ್ಲ. ಉಳಿದಂತೆ ಶಾಲಾ ಕಾಲೇಜುಗಳಲ್ಲಿ ವರ್ಗಗಳು ನಡೆದವು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
