ತುಂಗಭದ್ರಾ ಜಲಾಶಯ ಭರ್ತಿಗಾಗಿ ಶಾಸಕರಿಂದ ಹನುಮ ವ್ರತ!

ಬಳ್ಳಾರಿ

      ಬಳ್ಳಾರಿ ಜಿಲ್ಲೆಯ ರೈತರ ಜೀವನದ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ ಭರ್ತಿಗಾಗಿ ಪ್ರಾರ್ಥಿಸಿ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಹನುಮ ವ್ರತ ಆರಂಭಿಸಿದ್ದಾರೆ.

       ಜಿಲ್ಲೆಯ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ ಭರ್ತಿಗಾಗಿ ಪ್ರಾರ್ಥಿಸಿ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಹನುಮ ವ್ರತ ಆರಂಭಿಸಿದ್ದಾರೆ.ಶಾಸಕ ಗಾಲಿ ಸೋಮಶೇಖರ ರೆಡ್ಡಿಯಿಂದ ಮಳೆಗಾಗಿ ಪ್ರಾರ್ಥನೆಜಿಲ್ಲೆಯ ಹೊಸಪೇಟೆ ನಗರದ ತುಂಗಭದ್ರಾ ಜಲಾಶಯದ ಬೆಟ್ಟದ ಮೇಲಿರುವ ಆಂಜನೇಯಸ್ವಾಮಿ ದೇಗುಲಕ್ಕೆ ಭೇಟಿ ನೀಡಿದ ಶಾಸಕ ಸೋಮಶೇಖರ ರೆಡ್ಡಿ, ದೇಗುಲದ ಮೆಟ್ಟಿಲುಗಳನ್ನು ಬರಿಗಾಲಿನಲ್ಲೇ ಏರಿದರು.

      ಅವರಿಗೆ ಪಾಲಿಕೆ ಸದಸ್ಯರಾದ ಎಸ್.ಮಲ್ಲನಗೌಡ, ಶ್ರೀನಿವಾಸ ಮೋತ್ಕರ್ ಸಾಥ್ ನೀಡಿದರು.ವಿಶೇಷ ಪೂಜೆ: ದೇಗುಲದೊಳಗೆ ಪ್ರವೇಶಿಸಿದ ಶಾಸಕ ರೆಡ್ಡಿ, ಆಪ್ತ ಸಹಾಯಕ ಮುತ್ತಿಗಿ, ಪಾಲಿಕೆ ಸದಸ್ಯರಾದ ಎಸ್. ಮಲ್ಲನಗೌಡ ಹಾಗೂ ಶ್ರೀನಿವಾಸ ಮೋತ್ಕರ್, ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಜಿ.ಪುರುಷೋತ್ತಮ ಗೌಡರು ಶ್ರೀ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.ಧ್ಯಾನಾಸಕ್ತರಾದ ಶಾಸಕ ರೆಡ್ಡಿ  ದೇಗುಲದ ಒಂದು ಭಾಗದಲ್ಲಿ ಕುಳಿತುಕೊಂಡಿದ್ದ ಶಾಸಕ ಜಿ.ಸೋಮಶೇಖರ ರೆಡ್ಡಿ ಕೆಲ ಕಾಲ ಧ್ಯಾನಾಸಕ್ತರಾದರು. ಶ್ರೀರಾಮ, ಜಯರಾಯ, ಜಯ ಜಯ ರಾಮ ಎಂಬ ಮಂತ್ರ ಪಠಣ ಮಾಡುತ್ತಲೇ ಧ್ಯಾನ ಮಾಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link