ತಿಪಟೂರು
ನಗರದ ಐ.ಬಿ.ಸರ್ಕಲ್ನಿಂದ ಹಾಲ್ಕುರಿಕೆ ಮೂಲಕ ಹುಳಿಯಾರು, ಹಿರಿಯೂರು ಬೀದರ್, ಬಳ್ಳಾರಿಗೆ ಸಂಪರ್ಕ ಕಲ್ಪಿಸುವ ರಾಜ್ಯಹೆದ್ದಾರಿ ಪ್ರಾರಂಭದ ಐ.ಬಿ.ಸರ್ಕಲ್ನಿಂದಲೇ ಗುಂಡಿಗಳಿಂದ ಪ್ರಾರಂಭವಾಗಿ ಮುಂದೆ ಹೋದಂತೆ ರಸ್ತೆಯನ್ನು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ರಸ್ತೆಯು ಮಧ್ಯದಲ್ಲೇ ಹಾದು ಹೋಗಿರುವ ನಗರದ ಒಳಚರಂಡಿ ವ್ಯವಸ್ಥೆಯು ಇದ್ದು ಅದು ಅಲ್ಲಲ್ಲಿಯೇ ಕುಸಿತ ಕಾಣುತ್ತಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಒಂದೊಂದೇ ಮ್ಯಾನ್ಹೋಲ್ಗಳು ಮುರಿದು ಬೀಳುವುದರಲ್ಲಿ ಅನುಮಾನವೇ ಇಲ್ಲ. ಇನ್ನೂ ಈ ರಸ್ತೆಯಲ್ಲಿ ಅಪಾರ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿದ್ದು ಗುಂಡಿಗಳನ್ನು ತಪ್ಪಿಸಲು ಹೋಗಿ ದಿನನಿತ್ಯ ಒಂದಿಲ್ಲೊಂದು ಅಪಘಾತಗಳು ಸಂಭವಿಸುತ್ತಲೇ ಇದ್ದು ಹಲವಾರು ಜನರ ಕೈಕಾಲು ಮುರಿದುಕೊಂಡಿದ್ದಲ್ಲದೆ ಮೊನ್ನೆ ತಾನೇ ಇದೇ ಸ್ಥಳದಲ್ಲಿ ಅಪಘಾತ ಸಂಭವಿಸಿ ಒಬ್ಬ ವಿದ್ಯಾರ್ಥಿ ಸಾವನ್ನು ಗೆದ್ದು ಇನ್ನೂ ಆಸ್ಪತ್ರೆಯಲ್ಲಿದ್ದಾನೆ. ಈಗಲಾದರು ನಗರಸಭೆಯವರು ಮ್ಯಾನ್ಹೋಲ್ ದುರಸ್ತಿಮಾಡಿಸುವುದು ಒಳ್ಳೆಯದು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/08/18-TPR-4.gif)