ಬಳ್ಳಾರಿ
ಲೋಕಸಭಾ ಕ್ಷೇತ್ರದ ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿಯಾದ ಕಾ.ದೇವದಾಸ್ ರವರು ಕಗ್ಗಲ್ಲಿನಲ್ಲಿ ರಸ್ತೆಬದಿಯಲ್ಲಿ ಸೇರಿದ್ದ ಗ್ರಾಮಸ್ಥರು ಹಾಗೂ ಪಕ್ಷದ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದರು. “ಬೆಂಬಿಡದೆ ಜನರನ್ನು ಕಾಡುತ್ತಿರುವ ಸಮಸ್ಯೆಗಳ ವಿರುದ್ಧ ಎಸ್.ಯು.ಸಿ.ಐ ಕಮ್ಯೂನಿಸ್ಟ್ ಪಕ್ಷವು ಜನರ ಪ್ರಭಲ ಹೋರಾಟಗಳನ್ನು ಕಟ್ಟುತ್ತಿದೆ.
ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡಲು ಆಗ್ರಹಿಸಿ, ರೈತರ ಸಾಲ ಮನ್ನಾ ಮಾಡಲು ಆಗ್ರಹಿಸಿ, ನಿರುದ್ಯೋಗದ ವಿರುದ್ಧ, ಉದ್ಯೋಗ ಖಾತ್ರಿ ಯೋಜನೆಯಡಿ ಯುವಕರಿಗೆ ಉದ್ಯೋಗ ನೀಡಲು ಆಗ್ರಹಿಸಿ, ಬಿ.ಪಿ.ಎಲ್ ಕಾರ್ಡ್ ಹೊಂದಿರುವ ಬಡವರಿಗೆ ನೀಡುತ್ತಿರುವ ರೇಷನ್ ವಿತರಣೆಯಲ್ಲಿ ತಂದಿದ್ದ ಕೂಪನ್ ವ್ಯವಸ್ಥೆಯನ್ನು ರದ್ದು ಪಡಿಸಲು ಆಗ್ರಹಿಸಿ ಜನಗಳ ಹೋರಾಟಗಳನ್ನು ಎಸ್.ಯು.ಸಿ.ಐ ಕಮ್ಯೂನಿಸ್ಟ್ ಪಕ್ಷವು ಕಟ್ಟಿದೆ.
ಈ ರೀತಿಯ ಹೋರಾಟದ ರಾಜಕೀಯವನ್ನು ಎತ್ತಿಹಿಡಿಯಲು ಹಾಗೂ ಜನಪರ ಹೋರಾಟದ ಧ್ವನಿಯನ್ನು ಲೋಕಸಭೆಯಲ್ಲಿ ಮೊಳಗಿಸಲು, ಹಣ-ಹೆಂಡದ ಕೊಳೆತ ರಾಜಕೀಯವನ್ನು ನಡೆಸುತ್ತಿರುವ ಕಾಂಗ್ರೇಸ್, ಬಿಜೆಪಿ ಮತ್ತು ಇತರೆ ಪಕ್ಷಗಳನ್ನು ಸೋಲಿಸಲು ಹಾಗೂ ಭಗತ್ ಸಿಂಗ್, ನೇತಾಜಿ ರವರ ಹೋರಾಟದ ರಾಜಕೀಯ ಮಾರ್ಗವನ್ನು ಹಿಡಿದಿರುವ ಎಸ್.ಯು.ಸಿ.ಐ ಕಮ್ಯೂನಿಸ್ಟ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು” ಜನರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎಸ್.ಯು.ಸಿ.ಐ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಈ.ಹನುಮಂತಪ್ಪ, ಕಾರ್ಯಕರ್ತರಾದ ಗಾದಿಲಿಂಗಪ್ಪ, ಪಂಪಾಪತಿ, ಬಸಣ್ಣ ಇನ್ನಿರರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
