ಬೆಂಗಳೂರು
ವಿಧಾನಸೌಧದ ಬಳಿಯ ಪಿಡಬ್ಲ್ಯೂಡಿ ಮುಖ್ಯ ಇಂಜಿನಿಯರ್ ಕಚೇರಿಯ ಬಳಿ ಟ್ರ್ಯಾಕ್ಟರ್ ಚಾಲಕ ಶಿವನಾಯಕನನ್ನು ಇರಿದು ಕೊಲೆಮಾಡಿದ್ದ ಇಬ್ಬರು ಸುಲಿಗೆಕೋರರನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ
ಕೃತ್ಯದಲ್ಲಿ 17 ವರ್ಷದ ಅಪ್ರಾಪ್ತ ಬಾಲಕ ಭಾಗಿಯಾಗಿದ್ದು ಆತನನ್ನು ವಶಕ್ಕೆ ಪಡೆದಕೊಳ್ಳಲಾಗಿದೆ.ಲಿಂಗರಾಜಪುರದ ಹಳೆಬಾಗಲೂರಿನ ಸಯ್ಯದ್ ಸೈಫ್ ಅಲಿಯಾಸ್ ಮ್ಯಾಟರ್, ವೆಂಕಟೇಶಪುರದ ಸಯ್ಯದ್ ನವಾಜ್ ಅಲಿಯಾಸ್ ಬ್ರಾವೋ (19) ಬಂಧಿತ ಆರೋಪಿಗಳಾಗಿದ್ದಾರೆ.
ವಶಪಡಿಸಿಕೊಂಡಿರುವ 17 ವರ್ಷದ ಅಪ್ರಾಪ್ತ ಬಾಲಕನ ಜೊತೆ ಸೇರಿ ಗ್ಯಾಂಗ್ ಕಟ್ಟಿಕೊಂಡಿದ್ದ ಆರೋಪಿಗಳು ಕಳೆದ ಮೇ 11ರ ರಾತ್ರಿ 11.30ರ ವೇಳೆ ಪಿಡಬ್ಲ್ಯೂಡಿ ಮುಖ್ಯ ಇಂಜಿನಿಯರ್ ಕಚೇರಿಯ ಬಳಿ ಪಾದಚಾರಿ ರಸ್ತೆ ಅಗೆಯುವ ಬ್ರೇಕಿಂಗ್ ಕೆಲಸಕ್ಕೆ ಬಂದಿದ್ದ ವೀರಭದ್ರನಗರದ ಶಿವನಾಯಕ (45) ಎಂಬುವವರ ಬಳಿ ಹಣ, ಮೊಬೈಲ್ ದೋಚಲು ಮುಂದಾಗಿದ್ದಾರೆ.
ಪ್ರತಿರೋಧ ತೋರಿದ ಶಿವನಾಯಕ ಅವರ ಎದೆಗೆ ಡ್ಯಾಗರ್ನಿಂದ ಎದೆ, ಬೆನ್ನು, ಇತರೆ ಭಾಗಗಳಿಗೆ ಇರಿದು, ಕೊಲೆಮಾಡಿ ಪರಾರಿಯಾಗಿದ್ದರು.ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಹಲಸೂರು ಗೇಟ್ ಪೊಲೀಸ್ ಇನ್ಸ್ಪೆಕ್ಟರ್ ಹರಿವರ್ಧನ್, ಮತ್ತವರ ಸಿಬ್ಬಂದಿ ಖಚಿತ ಮಾಹಿತಿ ಮೇಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳು ರಾತ್ರಿ ವೇಳೆ ಒಂಟಿಯಾಗಿ ಓಡಾಡುವವರನ್ನು ಗುರಿಯಾಗಿಸಿಕೊಂಡು ಸುಲಿಗೆ ನಡೆಸುತ್ತಿದ್ದರು. ಬಂಧಿತ ಸಯ್ಯದ್ ನವಾಜ್ ವಿರುದ್ಧ ಆರ್ಟಿ ನಗರ, ಮಹಾಲಕ್ಷ್ಮಿ ಲೇಔಟ್ ಪೆÇಲೀಸ್ ಠಾಣೆಗಳಲ್ಲಿ ಸುಲಿಗೆ ಪ್ರಕರಣಗಳು ದಾಖಲಾಗಿವೆ.