ರಸ್ತೆ ಬದಿ ಔಷಧಿ ತ್ಯಾಜ್ಯ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಿ

ಹುಳಿಯಾರು:

     ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ಬಳಿಯ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಔಷಧಿ ತ್ಯಾಜ್ಯವನ್ನು ಬಿಸಾಡುತ್ತಿರುವವರ ವಿರುದ್ಧ ಕ್ರಮ ಕೈಗೊಲ್ಳುವಂತೆ ಔಷಧಿ ನಿಯಂತ್ರಣ ಇಲಾಖೆಯ ಅಧಿಕಾರಿಗಳಿಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸುರಿದಿರುವ ತ್ಯಾಜ್ಯದಲ್ಲಿ ಅರೆಬರೆ ಬಳಸಲಾಗಿರುವ ಔಷಧಗಳು, ಮಾತ್ರೆಗಳು, ಸೂಜಿಗಳು, ಬ್ಯಾಂಡೇಜ್ ಬಟ್ಟೆಗಳು ಸೇರಿದಂತೆ ನಾನಾ ಬಗೆಯ ತ್ಯಾಜ್ಯಗಳಿವೆ. ಈ ತ್ಯಾಜ್ಯ ಸುರಿದು ತಿಮಗಳುಗಳೆ ಕಳೆದಿದ್ದು ಸುತ್ತಲಿನ ಪರಿಸರದಲ್ಲಿ ಅಸಹ್ಯಕರ ಕಮಟು ವಾಸನೆ ಆವರಿಸಿದೆ.

    ಹೀಗೆ ರಾಸಾಯನಿಕಯುಕ್ತ ಔಷಧಗಳನ್ನು ತಂದು ಸುರಿಯಲಾಗಿರುವ ಪ್ರದೇಶದಲ್ಲಿ ದನಕರುಗಳು, ಕುರಿಗಳನ್ನು ಮೇಯಿಸಲಾಗುತ್ತದೆ. ಮಳೆಗೆ ತ್ಯಾಜ್ಯ ವಸ್ತುಗಳು ಹಾಗೂ ರಾಸಾಯನಿಕಯುಕ್ತ ಔಷಧಗಳು ಜಾನುವಾರು ಮೇವಿಗೆ ಸೇರಿಕೊಂಡು ಅವುಗಳ ಆರೋಗ್ಯದಲ್ಲಿ ದುಷ್ಪರಿಣಾಮ ಬೀರುವ ಆತಂಕ ನಿರ್ಮಾಣವಾಗಿದೆ.

      ಬಳಸುವ ಔಷಧಗಳು, ಸೀರಂಜ್ ಹಾಗೂ ರಕ್ತಸಿಕ್ತ ಬ್ಯಾಂಡೇಜ್‍ಗಳು ಎಲ್ಲೆಂದರಲ್ಲಿ ಬಿಸಾಡುವುದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಂಭವವಿದೆ. ಹಾಗಾಗಿ ಇಂತಹ ತ್ಯಾಜ್ಯವಸ್ತುಗಳನ್ನು ವೈಜ್ಞಾನಿಕ ಸಂಸ್ಕರಣೆ ಮೂಲಕ ನಾಶಗೊಳಿಸಬೇಕು ಎಂದು ಸೂಚನೆಯಿದೆ. ಗುಂಡಿ ತೆಗೆದು ಅದರಲ್ಲಿ ಊಳುವಂತೆಯೂ ನಿದರ್ಶನವಿದೆ. ಆದರೆ ಈ ಎಲ್ಲಾ ನಿಯಮಗಳನ್ನೂ ಗಾಳಿಗೆ ತೋರಿ ಬೇಕಾಬಿಟ್ಟಿ ಸಾರ್ವಜನಿಕ ಸ್ಥಳದಲ್ಲಿ ಎಸೆಯಲಾಗಿದೆ.

      ಔಷಧ ನಿಯಂತ್ರಣ ಇಲಾಖೆ ಈ ಬಗ್ಗೆ ಕಟ್ಟಿನಿಟ್ಟಿನ ಕ್ರಮ ಕೈಗೊಳ್ಳದಿರುವುದರಿಂದ ಉಪಯೋಗಿಸಲ್ಪಟ್ಟ ಔಷಧಗಳ ತ್ಯಾಜ್ಯವಸ್ತುಗಳನ್ನು ತಾಲೂಕಿನಲ್ಲಿ ಎಲ್ಲೆಂದರಲ್ಲಿ ಬಿಸಾಡುತ್ತಿರುವುದು ಮಾಮೂಲು ಸಂಗತಿಯಾಗಿದೆ. ಇನ್ನಾದರೂ ಹೀಗೆ ಸುರಿಯಲಾಗಿರುವ ಔಷಧಗಳ ಮೇಲಿರುವ ಬ್ಯಾಚ್ ನಂಬರ್ ಮೂಲಕ ಔಷಧ ಎಲ್ಲಿಂದ ಬಂದಿದೆ. ಯಾರು ಚೆಲ್ಲಿರಬಹುದೆಂದು ಪತ್ತೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap