ಹೊಸದುರ್ಗ:
ಇದೇ ತಿಂಗಳು 18ಕ್ಕೆ ನಡೆಯಲಿರುವ ಲೋಕಸಭಾ ಚುನಾವಣಾ ಪ್ರಯುಕ್ತ ತಾಲ್ಲೂಕಿನ ಸ್ವೀಪ್ ಸಮಿತಿ, ತಾಲ್ಲೂಕು ಪಂಚಾಯಿತಿ, ತಾಲ್ಲೂಕು ಕಛೇರಿ, ಪುರಸಭೆ, ಶಿಶು ಅಭಿವೃದ್ದಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಬುಧವಾರ ಬೆಳಿಗ್ಗೆ 8 ಗಂಟೆಗೆ ಮಹಿಳೆಯರು ಸೇರಿ ಪಟ್ಟನದ ಟಿಬಿ ವೃತ್ತದಲ್ಲಿ ರಂಗೋಲಿ ಬಿಡಿಸುವ ಮೂಲಕ ಮತದಾನ ಜಾಗೃತಿ ನಡೆಸಿದರು.
ಈ ಸಂದರ್ಭದಲ್ಲಿ ವಿಶೇಷವಾಗಿ ವಿಕಲಚೇತನರು ರಂಗೋಲಿ ಬಿಡಿಸಿ ಮತದಾನ ಜಾಗೃತಿ ಮಾಡುವುದರಿಮದ ಸಾರ್ವಜನಿಕರಿಗೆ ಗಮನ ಸೆಳೆದರು.
ಈ ವೇಳೆ ಚುನಾವಣಾಧಿಕಾರಿ ಶ್ರೀಮತಿ ಸುಧಾ, ತಹಶೀಲ್ದಾರ್ ವಿಜಯ್ ಕುಮಾರ್ , ಜಿ.ಪಂ. ಅಧ್ಯಕ್ಷೆ ವಿಶಾಲಕ್ಷಿ ನಟರಾಜ್, ಪುರಸಭೆ ಪರಿಸರ ಅಭಿಯಂತರ ಅಧಿಕಾರಿ ತಿಮ್ಮರಾಜು, ಆರೋಗ್ಯ ಅಧಿಕಾರಿ ಕರೀಂ ಉಲ್ಲಾ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಸುಜಾತ, ತಾ.ಪಂ ಪ್ಯಾಯಾಜ್, ಸಂರಕ್ಷಾಣಾಧಿಕಾರಿ ಶ್ರೀಮತಿ ಶ್ರೀದೇವಿ, ಶ್ರೀಮತಿ ಶಬಾನ, ಶ್ರೀಮತಿ ರೂಪ, ಶ್ರೀಮತಿ ಮಾಧುರಿ ಹಾಗೂ ತಾಲ್ಲೂಕಿನ ಪಟ್ಟಣ ಸೇರಿದಂತೆ ಎಲ್ಲಾ ಗ್ರಾಮಗಳ ಅಂಗನವಾಡಿ ಕಾರ್ಯಕರ್ತರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ