ಚಿತ್ರದುರ್ಗ
ವೃತ್ತಿ ಜೀವನದಲ್ಲಿ ಉತ್ತಮ ವ್ಯಕ್ತಿತ್ವ ಅಗತ್ಯ ಎಂದು ಡಯಟ್ ಪ್ರಾಂಶುಪಾಲ ಕೆ.ಕೋದಂಡರಾಮ ತಿಳಿಸಿದರು. ಅವರು ನಗರದ ಡಯಟ್ನಲ್ಲಿ ನಿವೃತ್ತ ಅಧೀಕ್ಷಕ ಕೆ.ಆರ್.ಪ್ರಕಾಶ್ ರವರಿಗೆ ಏರ್ಪಡಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ ನಾವು ನಮ್ಮ ವೃತ್ತಿಯಲ್ಲಿ ಪ್ರೀತಿ ಬೆಳೆಸಿಕೊಂಡಾಗ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ ಮುಖ್ಯಸ್ಥರು ಮತ್ತು ಸಿಬ್ಬಂದಿ ವರ್ಗದವರ ಮಧ್ಯೆ ಉತ್ತಮ ಬಾಂದವ್ಯವಿದ್ದಾಗ ಮಾತ್ರ ಕಛೇರಿ ಕೆಲಸಗಳು ಸುಗಮವಾಗಿ ಸಾಗುತ್ತವೆ ಎಂದರು.
ಉಪಪ್ರಾಂಶುಪಾಲ ಎನ್.ಎಂ.ರಮೇಶ್ ಮಾತನಾಡಿ ಧನಾತ್ಮಕ ಚಿಂತನೆಯಿಂದ ಉತ್ತಮವಾಗಿ ಕೆಲಸ ಮಾಡಬಹುದು. ಸಾತ್ವಿಕ ಮೃದು ಸ್ವಭಾವದ ವ್ಯಕ್ತಿಯಾದ ಪ್ರಕಾಶ್ರವರು 39ವರ್ಷಗಳ ಕಾಲ ಸುದೀರ್ಘ ಸೇವೆಯಲ್ಲಿ ಸ್ನೇಹಜೀವಿಯಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ ಎಂದರು.
ಉಪನ್ಯಾಸಕರಾದ ಹನುಮಂತರಾಯ, ಪಿ.ರಾಜಣ್ಣ, ಭರಮಪ್ಪ ಮೈಸೂರು, ಎಸ್.ಬಸವರಾಜು, ಆರ್.ವಿ.ಸುಧಾ, ಕೆ.ಎಂ.ನಾಗರಾಜು, ಅಧೀಕ್ಷಕಿ ಗೀತಾ, ದೈ.ಶಿ.ಶಿ. ಶೋಭಾರಾಣಿ, ಉಪನಿರ್ದೇಶಕ ಕಛೇರಿಯ ಪತ್ರಾಂಕಿತ ಸಹಾಯಕ ದೇವರಾಜು ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
