ಹೊತ್ತಿ ಉರಿದ ಪೇಂಟ್ ಅಂಗಡಿ, 55 ಲಕ್ಷ ಹಾನಿ

ದಾವಣಗೆರೆ

       ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಹಾರ್ಡ್‍ವೇರ್ ಅಂಗಡಿಯೊಂದು ಬೆಂಕಿ ಅವಘಡಕ್ಕೆ ಒಳಗಾಗಿ, ಸುಮಾರು 55 ಲಕ್ಷ ರೂ.ಗಳಿಗೂ ಹೆಚ್ಚು ನಷ್ಟ ಸಂಭವಿಸಿರುವ ಘಟನೆ ನಗರದ ಬಿನ್ನಿ ಕಂಪನಿ ರಸ್ತೆಯಲ್ಲಿ ಗುರುವಾರ ಸಂಭವಿಸಿದೆ.

        ನಗರದ ಬಿನ್ನಿ ಕಂಪನಿ ರಸ್ತೆಯ ಮುದ್ದಳ್ಳಿ ಗಂಗಾ ಎಂಟರ್ ಪ್ರೈಸಸ್ ಹಾರ್ಡ್‍ವೇರ್ ಅಂಗಡಿಯ 2ನೇ ಮಹಡಿಯಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಆರಂಭದಲ್ಲಿ ಸಣ್ಣದಾಗಿ ಕಾಣಿಸಿಕೊಂಡ ಬೆಂಕಿಯು ಕ್ಷಣಾರ್ಧದಲ್ಲಿ ಅಂಗಡಿಯಲ್ಲಿದ್ದ ಪ್ಲಾಸ್ಟಿಕ್ ಪೈಪ್, ಪ್ಲಾಸ್ಟಿಕ್ ಸಾಮಗ್ರಿ, ಪೇಂಟ್ ಡಬ್ಬಿಗಳು, ಪೆಟ್ರೋಲಿಯಂ ಸಾಮಗ್ರಿಗಳನ್ನು ಸುಟ್ಟು ಕರಕಲು ಮಾಡಿದೆ.

         ಎಂದಿನಂತೆ ಮುದ್ದಳ್ಳಿ ಗಂಗಾ ಎಂಟರ್‍ಪ್ರೈಸಸ್‍ನ ಬಾಗಿಲನ್ನು ಬೆಳಿಗ್ಗೆ ತೆರೆಯಲಾಯಿತು. ಬೆಳಿಗ್ಗೆ 10.30ರ ವೇಳೆ ಅಂಗಡಿ ಕಟ್ಟಡದ 2ನೇ ಮಹಡಿಯಲ್ಲಿ ಸಣ್ಣದಾಗಿ ಬೆಂಕಿ ಕಾಣಿಸಿಕೊಂಡು, ಹೊಗೆ ಬರಲಾರಂಭಿಸಿದೆ. ತಕ್ಷಣವೇ ನೀರನ್ನು ಹಾಕಿ ಬೆಂಕಿ ನಂದಿಸಲು ಅಂಗಡಿ ಮಾಲೀಕರು, ಸಿಬ್ಬಂದಿ ಪ್ರಯತ್ನಿಸಿದ್ದಾರೆ. ನೂರಾರು ಜನರು ಸ್ಥಳಕ್ಕೆ ಧಾವಿಸಿ, ನೀರು ಸುರಿದು ಬೆಂಕಿ ನಂದಿಸಲು ಮಾಡಿದ ಪ್ರಯತ್ನವೂ ವಿಫಲವಾಯಿತು. ನಿಯಂತ್ರಣಕ್ಕೆ ಬಾರದ ಬೆಂಕಿ ತೀವ್ರವಾಗಿ ಹೊತ್ತಿಕೊಂಡಿದ್ದರಿಂದ ತಕ್ಷಣವೇ ಅಗ್ನಿಶಾಮಕ ದಳದ ಠಾಣೆಗೆ ವಿಷಯ ಮುಟ್ಟಿಸಲಾಯಿತು.

            ಸತತ ಮೂರು ಗಂಟೆಗೂ ಹೆಚ್ಚು ಕಾಲ ಬೆಂಕಿಯ ರುದ್ರನರ್ತನ ಮುಂದುವರಿದಿತ್ತು. ಬೆಂಕಿ ಅವಘಡದ ಸುದ್ದಿ ತಿಳಿದಾಕ್ಷಣ ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ದಳದ ಐದು ವಾಹನಗಳು, ಅಧಿಕಾರಿಗಳು, ಸಿಬ್ಬಂದಿಗಳು ಬೆಂಕಿ ನಂದಿಸಲು ಹರ ಸಹಾಸಪಟ್ಟರು.
ಬೆಂಕಿಯ ರೌದ್ರನರ್ತನ ಹೆಚ್ಚುತ್ತಿದ್ದಂತೆ ಅಂಗಡಿ ವ್ಯವಸ್ಥಾಪಕ ಶಿವರಾಜ ತಕ್ಷಣವೇ ಸಿಬ್ಬಂದಿಯನ್ನು ಹೊರಗೆ ಸುರಕ್ಷಿತ ಸ್ಥಳಕ್ಕೆ ಕಳಿಸಿದ್ದಾರೆ. ಹೀಗಾಗಿ ಅದೃಷ್ಟಾವಷಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸುಮಾರು 3 ಗಂಟೆಗೂ ಹೆಚ್ಚು ಕಾಲ ಹೊತ್ತಿ ಉರಿದ ಮುದ್ದಳ್ಳಿ ಗಂಗಾ ಎಂಟರ್ ಪ್ರೈಸಸ್‍ನ ಕಟ್ಟಡದಲ್ಲಿ ಬೆಂಕಿ ಅವಘಡದಿಂದ ಸುಮಾರು 55 ಲಕ್ಷ ರು.ಗೂ ಅದಿಕ ಹಾನಿ ಸಂಭವಿಸಿದ್ದು, ಘಟನೆಯಲ್ಲಿ ಆದ ಹಾನಿ ಬಗ್ಗೆ ನಿಖಿರ ಮಾಹಿತಿ ಲಭ್ಯವಾಗಿಲ್ಲ. ಈ ಕುರಿತು ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link