ಮಧುಗಿರಿ :
ಖಚಿತ ಮಾಹಿತಿ ಮೇರೆಗೆ ತಾಲ್ಲೂಕಿನ ವ್ಯಾಪ್ತಿಯ ಆಂಧ್ರಪ್ರದೇಶ ಗಡಿ ಭಾಗದಲ್ಲಿ ಏಕ ಕಾಲಕ್ಕೆ ದಾಳಿ ನಡೆಸಿದ ಅಬಕಾರಿ ಪೋಲೀಸರು ಮೂರು ಪ್ರಕರಣಗಳನ್ನು ದಾಖಲಿಸಿದ್ದಾರೆ.
ಅಕ್ರಮ ಮದ್ಯದ ಬಗ್ಗೆ ನಿರಂತರ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಆ. 24 ರಂದು ಮಧುಗಿರಿ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರ ನೇತೃತ್ವದಲ್ಲಿ ಉಪ ವಿಭಾಗದ ಕಾರ್ಯಕಾರಿ ಅಧಿಕಾರಿಗಳು ಹಾಗೂ ಮಧುಗಿರಿ ವಲಯ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಮಧುಗಿರಿ ತಾಲ್ಲೂಕಿನ ಅಣ್ಣೇನಹಳ್ಳಿ, ಕಸಿನಾಯಕನಳ್ಳಿ, ಜಲತಿಮ್ಮನಹಳ್ಳಿ, ವಿಠಲಾಪುರ, ಚಿಕ್ಕದಾಳವಾಟ್ಟ, ದೊಡ್ಡದಾಳವಟ್ಟ, ಐಡಿ ಹಳ್ಳಿ, ತಾಡಿ ಗ್ರಾಮಗಳಲ್ಲಿ ಸಾಮೂಹಿಕ ದಾಳಿ ನಡೆಸಿ ಕಸಿನಾಯಕನಹಳ್ಳಿ ಗ್ರಾಮದ ಮಂಜುನಾಥ ಬಿನ್ ನಾರಾಯಣಪ್ಪ ಇವರ ವಿರುದ್ದ ಪ್ರಕರಣ ಮತ್ತು ವಿವಿಧೆಡೆ ಮೂರು ಪ್ರಕರಣಗಳನ್ನು ದಾಖಲಿಸಿದೆ.
ಸದರಿ ಪ್ರಕರಣಗಳಿಂದ ಒಟ್ಟು 25.650 ಲೀಟರ್ ಮದ್ಯ ಮತ್ತು 07.800 ಲೀಟರ್ ಬಿಯರ್ ಬಾಟಲ್ ವಶಪಡಿಸಿಕೊಂಡು, ಆಂಧ್ರ ಪ್ರದೇಶ ಗಡಿ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡದಂತೆ ಕ್ರಮ ಕೈಗೊಳ್ಳಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
