ಮುಂಗಾರು ಮಾರುತ ದುರ್ಬಲವಾಗಲಿದೆ: ಸ್ಕೈಮೆಟ್‌

ಬೆಂಗಳೂರು:

    ಮುಂದಿನ 4 ವಾರ ಮುಂಗಾರು ಮಾರುತಗಳು ದುರ್ಬಲವಾಗಲಿವೆ ಎಂದು ಹವಾಮಾನ  ಮುನ್ಸೂಚನೆ ನೀಡುವ ಖಾಸಗಿ ಸಂಸ್ಥೆ ‘ಸ್ಕೈಮೆಟ್ ವೆದರ್’ ಸೋಮವಾರ ತಿಳಿಸಿದೆ. 

     ದುರ್ಬಲ  ಮುಂಗಾರು ಮಾರುತಗಳು ಕೃಷಿಯ ಮೇಲಿನ ಪರಿಣಾಮಗಳ ಬಗ್ಗೆಯೂ ಸ್ಕೈಮೆಟ್‌ ಕಳವಳ ವ್ಯಕ್ತಪಡಿಸಿದ್ದು, ‘ಎಕ್ಸ್‌ಟೆಂಡೆಡ್‌ ರೇಂಜ್ ಪ್ರಿಡಿಕ್ಷನ್ ಸಿಸ್ಟಮ್ (ದೀರ್ಘ ಕಾಲದ ಹವಾಮಾನ ಮುನ್ಸೂಚನೆ ನೀಡುವ ವ್ಯವಸ್ಥೆ)–ಇಆರ್‌ಪಿಎಸ್‌’ ಜುಲೈ 6 ರವರೆಗೆ ಅಥವಾ ಮುಂದಿನ ನಾಲ್ಕು ವಾರಗಳವರೆಗೆ ನಿರಾಶಾದಾಯಕ ಸೂಚನೆಗಳನ್ನು ನೀಡಿದೆ.

    ಇದು ಬಿತ್ತನೆಯ ನಿರ್ಣಾಯಕ ಸಮಯವಾಗಿದ್ದು, ಮಳೆ ನಿರೀಕ್ಷೆಯೊಂದಿಗೆ ರೈತರು ಭೂಮಿ ಹದಗೊಳಿಸುವ ಹೊತ್ತಾದಗಿದೆ. ಮಧ್ಯ ಭಾರತ ಮತ್ತು ಪಶ್ಚಿಮ ಭಾಗಗಳು ಋತುವಿನ ಆರಂಭದಲ್ಲಿ ಅಸಮರ್ಪಕ ಮಳೆಯಿಂದಾಗಿ ಒಣಹವೆ ಎದುರಿಸಲಿವೆ’ ಎಂದು ಅದು ಹೇಳಿದೆ.

   ಇನ್ನು ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿರುವ ಬಿಪೊರ್ಜೊಯ್‌ ಚಂಡಮಾರುತವು ಮೊದಲು ಮುಂಗಾರು ಪ್ರವೇಶವನ್ನು ವಿಳಂಬಗೊಳಿಸಿತ್ತು. ಇದೇ ಚಂಡಮಾರುತ ಈಗ ಮುಂಗಾರು ಮಾರುತಗಳ ವ್ಯವಸ್ಥೆಯ ಪ್ರಗತಿಗೆ ಅಡ್ಡಿಯಾಗುತ್ತಿದೆ. ಜತೆಗೆ ಮಾರುತಗಳು ಒಳನಾಡು ಪ್ರವೇಶವನ್ನೂ ತಡೆಯುತ್ತಿದೆ. ಮುಂಗಾರು ಮಾರುತಗಳು ಸಾಮಾನ್ಯವಾಗಿ ಮಹಾರಾಷ್ಟ್ರ, ಒಡಿಶಾ, ತೆಲಂಗಾಣದ ಅರ್ಧಭಾಗ, ಛತ್ತೀಸ್‌ಗಢ, ಜಾರ್ಖಂಡ್ ಮತ್ತು ಬಿಹಾರವನ್ನು ಜೂನ್ 15ರ ವೇಳೆಗೆ ಆವರಿಸುತ್ತದೆ. ಈ ಬಾರಿ ಪಶ್ಚಿಮಘಟ್ಟ ದಾಟಿ ಒಳನಾಡು ಪ್ರವೇಶಿಸಲು ಹೆಣಗಾಡುತ್ತಿದೆ ಎಂದು ಸ್ಕೈಮೆಟ್‌ ಹೇಳಿದೆ.

     ಮಾನ್ಸೂನ್‌ ಮಾರುತ ಈಶಾನ್ಯ ಮತ್ತು ಪಶ್ಚಿಮ ಕರಾವಳಿಗೆ ಮಾತ್ರವೇ ಸೀಮಿತವಾಗಿದೆ. ದುರದೃಷ್ಟವಶಾತ್, ಮುಂಗಾರು ಮಾರುತಗಳಿಗೆ ಪೂರಕವಾಗಿ ಬಂಗಾಳ ಕೊಲ್ಲಿಯಲ್ಲಿ ಹವಾಮಾನ ವ್ಯವಸ್ಥೆಗಳು ಅಭಿವೃದ್ಧಿಯಾಗುವ ಯಾವುದೇ ಲಕ್ಷಣಗಳೂ ಕಾಣುತ್ತಿಲ್ಲ. ನೈಋತ್ಯ ಮುಂಗಾರು ಮಾರುತಗಳು ಈ ಬಾರಿ ಜೂನ್‌ 1ರ ಬದಲಿಗೆ, ಒಂದು ವಾರ ವಿಳಂಬವಾಗಿ ಕೇರಳ ಪ್ರವೇಶಿಸಿವೆ ಎಂದು ಸ್ಕೈಮೆಟ್‌ ಹೇಳಿದೆ.

      ಮಾನ್ಸೂನ್ ಉಲ್ಬಣವು ಈಶಾನ್ಯ ಮತ್ತು ಪಶ್ಚಿಮ ಕರಾವಳಿಗೆ ಸೀಮಿತವಾಗಿದೆ. ದುರದೃಷ್ಟವಶಾತ್, ಮುಂದಿನ ದಿನಗಳಲ್ಲಿ ಬಂಗಾಳ ಕೊಲ್ಲಿಯಲ್ಲಿ ಹವಾಮಾನ ವ್ಯವಸ್ಥೆಗಳು ಹೊರಹೊಮ್ಮುವ ಯಾವುದೇ ಲಕ್ಷಣಗಳಿಲ್ಲ, ಅವು ಮಾನ್ಸೂನ್‌ನ ನಿರ್ಣಾಯಕ ಚಾಲಕಗಳಾಗಿವೆ ಎಂದು ಸ್ಕೈಮೇಟ್ ಅಭಿಪ್ರಾಯಪಟ್ಟಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link