ನವದೆಹಲಿ:
ಜಗತ್ತಿನಲ್ಲಿ ಶಾಪಿಂಗ್ ಅಂದರೆ ಬರೀ ಮಹಿಳೆರೇ ದುಂಬಾಲು ಬೀಳುತ್ತಾರೆ ಎನ್ನುವುದು ಸಮಾನ್ಯವಾದ ಮಾತು ಆದರೆ ಪುರುಷರಲ್ಲೂ ಶಾಪಿಂಗ್ ಹುಚ್ಚು ಹೆಚ್ಚಿರುವವರು ಇರುತ್ತಾರೆ ಎಂದು ಇಲ್ಲೋಬ್ಬ ಋಜುವಾತು ಮಾಡಿದ್ದಾನೆ ತನ್ನನ್ನು ಶಾಪಿಂಗ್ ಗೆ ಕರೆದೊಯ್ಯಲಿಲ್ಲಾ ಎಂಬ ಕಾರಣಕ್ಕೆ ಯುವಕನೊಬ್ಬನ ಮೇಲೆ ತೀವ್ರವಾಗಿ ಕ್ರೋಧಗೋಂಡು ಆ ಯುವಕನನ್ನು ಮನ ಬಂದಂತೆ ಇರಿದು ಹತ್ಯೆ ಮಾಡಿರುವ ಘಟನೆ ಜಹಾಂಗೀರ್ ಪುರದಲ್ಲಿ ನೆನ್ನೆ ನಡೆದಿದೆ. ದೀಪಕ್ ಅಲಿಯಾಸ್ ಬಲ್ಲಿ (19) ಮೃತ ಯುವಕನೆಂದು ಪೊಲೀಸರು ತಿಳಿಸಿದ್ದಾರೆ ಮತ್ತು ಯೋಗೇಶ್ ಹತ್ಯೆ ಮಾಡಿದ ಆರೋಪಿ ಎಂದು ಪೊಲೀಸರು ತಮ್ಮ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ .








