ಒಡಿಶಾ ಈಗ “ತಿತ್ಲಿ”ಯ ವಶ

ಭುವನೇಶ್ವರ್:
       ಭಾರತದಲ್ಲಿನ ಈಗಿನ ಹವಾಮಾನ ಪರಿಸ್ಥಿತಿಯಲ್ಲಿ ಎಲ್ಲಿ ಯಾವಾಗ ಮಳೆ ಬಂದು ಪ್ರವಾಹ ಉಕ್ಕುವುದೋ ಎಂಬ ಭೀತಿ ಇದ್ದೇ ಇದೆ ಅದರ ಜೊತೆಗೆ ಸಮುದ್ರದ ಆಳದಲ್ಲಿ ಆಗುವ ವಾಯುಭಾರ ಕುಸಿತದಿಂದಾಗಿ  ಒಡಿಶಾದ ಗೋಪಾಲ್ಪುರದಲ್ಲಿ ಇಂದು ಮುಂಜಾನೆಯಿಂದ  ಗಂಟೆಗೆ 126 ಕಿಲೋ ಮೀಟರ್ ವೇಗದಲ್ಲಿ ಬೀಸುತ್ತಿರುವ  ಚಂಡಮಾರುತದಿಂದಾಗಿ  ಅನೇಕ ಕಡೆಗಳಲ್ಲಿ ಭೂ ಕುಸಿತ ಉಂಟಾಗಿದೆ ಮತ್ತು ಸುಮಾರು ದಿನದಿಂದ ತಿತ್ಲಿ ಚಂಡಮಾರುತ ಇನ್ನೂ ಒಂದು ಅಥವಾ ಎರಡು ಗಂಟೆಗಳಲ್ಲಿ  ಸಂಪೂರ್ಣ ಒಡಿಶಾ ಕರಾವಳಿಯನ್ನು ಆವರಿಸಲಿದೆ ಎಂದು ಮೂಲಗಳು ತಿಳಿಸಿವೆ.
      ಇನ್ನೂ ಪೂರ್ವ ಫಲಿತಾಂಶದಂತೆ ಈಗಾಗಲೆ ಕೆಲವೆಡೆಗಳಲ್ಲಿ  ಭೂ ಕುಸಿತ ಪ್ರಕ್ರಿಯೆ ಆರಂಭವಾಗಿದೆ ಎಂದು  ಭುವನೇಶ್ವರದ ಹವಾಮಾನ ಇಲಾಖೆ ನಿರ್ದೇಶಕ ಹೆಚ್. ಆರ್. ಬಿಸ್ವಾಸ್ ಹೇಳಿದ್ದಾರೆ.ತಿತ್ಲಿಯ ಆರ್ಭಟ ಕರ್ನಾಟಕದ ಮೇಲೂ ಆಗಬಹುದೆಂದು ಹವಾಮಾನ ಇಲಾಖೆ ತಿಳಿಸಿದೆ. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap