ನಾನು ದಂಡ ಕಟ್ಟಲು ಸಿದ್ದನಿದ್ದೇನೆ : ಪ್ರಶಾಂತ್ ಭೂಷಣ್

ನವದೆಹಲಿ :

       ಸುಪ್ರೀಂ ಕೋರ್ಟ್ ತನಗೆ ವಿಧಿಸಿರುವ ದಂಡವನ್ನು ನಾನು ಕಟ್ಟುತ್ತೇನೆ ಎಂದು ಹಿರಿಯ ವಕೀಲರಾದ ಪ್ರಶಾಂತ್ ಭೂಷಣ್ ತಿಳಿಸಿದ್ದಾರೆ. ದೇಶದ ಅತ್ಯುನತ ನ್ಯಾಯ ಪೀಠ ಎಂದೇ ಕರೆಯಲ್ಪಡುವ ಸುಪ್ರೀಂ ಕೋರ್ಟ್‌ ಅವರಿಗೆ ಕ್ಷಮೆ ಕೇಳಲು ಸಮಯಾವಕಾಶ ನೀಡಿತ್ತು ಆದರೆ ಅದು ಜಾರಿಗೆ ಬರದ ಕಾರಣದಿಂದಾಗಿ ಇಂದು ಶಿಕ್ಷೆ ಮತ್ತು ದಂಡವನ್ನು ತಿಳಿಸಿದ ಕೋರ್ಟ್ ಅವರು ಮಾಡಿದ ತಪ್ಪಿಗೆ 1ರುಪಾಯಿ ದಂಡ ಅಥವಾ 3 ತಿಂಗಳ ಕಾಲ ಜೈಲು ಶಿಕ್ಷೆ ನೀಡಿತ್ತು .  

      ಪ್ರಶಾಂತ್ ಭೂಷಣ್ ಅವರ ಪರ ವಾದಮಂಡಿಸಿದ ಹಿರಿಯ ವಕೀಲ ರಾಜೀವ್ ಧವನ್ ಅವರು, ಪ್ರಶಾಂತ್ ಭೂಷಣ್ ಅವರನ್ನು ಶಿಕ್ಷೆಗೊಳಪಡಿಸುವ ತೀರ್ಪನ್ನು ಮರುಪರಿಶೀಲಿಸಬೇಕು ಹಾಗೂ ಅವರಿಗೆ ಯಾವುದೇ ಶಿಕ್ಷೆ ವಿಧಿಸಬಾರದು. ಭೂಷಣ್ ಅವರ ಪ್ರಕರಣವನ್ನು ಮುಚ್ಚುವುದು ಮಾತ್ರವಲ್ಲ, ವಿವಾದವನ್ನೇ ಅಂತ್ಯಗೊಳಿಸುವ ಮೂಲಕ ನ್ಯಾಯಾಲಯ ಉತ್ತಮ ಸಂದೇಶವನ್ನು ರವಾನಿಸಬೇಕು ಎಂದು ಮನವಿ ಮಾಡಿದರು.  

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap