ನವದೆಹಲಿ:
ದೇಶದ ಎತ್ತರದ ಯುದ್ಧ ಭೂಮಿಯಾಗಿರುವ ಲಡಾಖ್ ನಲ್ಲಿ ಭಾಷಣ ಮಾಡಲು ಆಗುತ್ತದೆ ಎಂದ ಮೇಲೆ ಆ ಭಾಷಣದಲ್ಲಿ ಚೀನಾ ಹೆಸರು ಪ್ರಸ್ತಾಪಿಸುವುದಕ್ಕೇಕೆ ಹಿಂಜರಿಕೆ ಎಂದು ಎಐಎಂಐಎಂ ನ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.
ಗಲ್ವಾನ್ ಗಡಿಯಲ್ಲಿ ಚೀನಾ-ಭಾರತದ ನಡುವೆ ಘರ್ಷಣೆ ಉಂಟಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಲೇಹ್ ಗೆ ಭೇಟಿ ನೀಡಿ ಯೋಧರೊಂದಿಗೆ ಮಾತನಾಡಿ, ಗಾಯಗೊಂಡ ಯೋಧರ ಆರೋಗ್ಯ ವಿಚಾರಿಸಿದ್ದರು. ಈ ಬೆನ್ನಲ್ಲೇ ಟ್ವೀಟ್ ಮಾಡಿರುವ ಎಂಐಎಂ ಮುಖಂಡ ಅಸಾದುದ್ದೀನ್ ಓವೈಸಿ, ಪ್ರಧಾನಿಗಳೇ, ನೀವು ಯೋಧರನ್ನು ಭೇಟಿ ಮಾಡಿ, ಗಾಯಗೊಂಡ ಯೋಧರ ಆರೋಗ್ಯ ವಿಚಾರಿಸಿದ್ದು ಒಳ್ಳೆಯದು, ಇದರಿಂದ ಅವರ ನೈತಿಕ ಸ್ಥೈರ್ಯ ಹೆಚ್ಚಲಿದೆ ಎಂದು ಟ್ವೀಟ್ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/07/Untitled-1.gif)